ಸ್ನೇಹಿತ ದರ್ಶನ್ ಬೆಂಬಲಕ್ಕೆ ನಿಂತ ಸುದೀಪ್ ಹೇಳಿದ್ದೇನು?

Sudeep about darshan hospete incident : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದು ಅವಮಾನ ಮಾಡಿರುವುದು ಈಗ ಕನ್ನಡ ಚಿತ್ರರಂಗದ ಎಲ್ಲಾ ಸೆಲೆಬ್ರಿಟಿಗಳ ಅಸಮಧಾನಕ್ಕೆ ಗುರಿಯಾಗಿದೆ. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಒಂದಾನೊಂದು ಕಾಲದ ಗೆಳೆಯನ ಬೆಂಬಲಕ್ಕೆ ನಿಂತು ಪತ್ರದಲ್ಲಿ ಏನೆಲ್ಲಾ ಬರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

” ನಮ್ಮ ನೆಲ ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು. ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ ಹಾಗೆಯೇ ಪ್ರತಿಯೊಂದು ಪರಿಹಾರವೂ ಹಲವಾರು ಪರಿಹಾರದ ದಾರಿಗಳನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹನಾಗಿದ್ದಾನೆ ಮತ್ತು ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಕೂಡ ಪರಿಹರಿಸಬಹುದು.

ವಿಡಿಯೋವನ್ನು ನೋಡಿ ನಾನು ತುಂಬಾ ವಿಚಾಲಿತನದೆ ಆ ಸಿನಿಮಾಗೆ ಸಂಬಂಧಪಟ್ಟ ಅನೇಕರು ಮತ್ತು ಸಿನಿಮಾದ ಭಾಗವಾಗಿದ್ದ ಪ್ರಮುಖ ಮಹಿಳೆ ಕೂಡ ಇದ್ದರು. ಅವರೆಲ್ಲ ಆ ಸಿನಿಮಾದ ಕಾರ್ಯಕ್ರಮದ ಭಾಗವಾಗಿದ್ದರು ಆ ಸಮಯದಲ್ಲಿ ಸಂಭವಿಸಿದ ಅಗೌರವದ ಅವಘಡಕ್ಕೆ ಯಾವುದೇ ಸಂಬಂಧವಿರಲಿಲ್ಲ ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಆಕ್ರೋಶವನ್ನು ಹೊರ ಹಾಕುವ ಮಾರ್ಗ ಇದಲ್ಲ. ದರ್ಶನ್ ಹಾಗೂ ಪುನೀತ್ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಿಗೆ ಅಸಮಾಧಾನವಿದೆ ಎಂಬುದು ನನಗೆ ಗೊತ್ತಿದೆ. ಪುನೀತ್ ಅವರು ಕೂಡ ಈ ಘಟನೆಯನ್ನು ಒಪ್ಪುತ್ತಿರಲಿಲ್ಲ ಮತ್ತು ಸಹಕರಿಸುತ್ತಿರಲಿಲ್ಲ ಯಾಕೆಂದರೆ ಅವರು ಎಲ್ಲರನ್ನೂ ಗೌರವಿಸುತ್ತಿದ್ದರು.

ಯಾರೋ ಒಬ್ಬ ಗುಂಪಿನಲ್ಲಿ ಈ ರೀತಿ ಮಾಡಿರುವುದಕ್ಕಾಗಿ ಇಡೀ ವ್ಯವಸ್ಥೆಯನ್ನು ದೂರುವುದು ಸರಿಯಲ್ಲ. ವ್ಯವಸ್ಥೆ ಪ್ರೀತಿ ಹಾಗೂ ಗೌರವಗಳಿಂದ ತುಂಬಿದ ಎಂಬುದನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ದರ್ಶನ್ ಕನ್ನಡ ಚಿತ್ರರಂಗಕ್ಕೆ ಹಾಗೂ ನಾಡು ಮತ್ತು ನುಡಿಗೆ ಅಪಾರ ಕೊಡುಗೆಯನ್ನು ನೀಡಿರುವ ಕಲಾವಿದ.

ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು ಆದರೆ ನನ್ನ ಮನಸ್ಸಿನಲ್ಲಿರುವುದನ್ನು ನಾನು ಹೇಳಲೇಬೇಕು. ಈ ಘಟನೆ ನನ್ನನ್ನು ವಿಚಾಲಿತನನ್ನಾಗಿ ಮಾಡಿದೆ. ಕನ್ನಡ ಚಿತ್ರರಂಗ ಹಾಗೂ ಜನ ಕರ್ನಾಟಕ ಹಾಗೂ ಕನ್ನಡ ಭಾಷೆ ಹೆಮ್ಮೆಪಡುವಂತಹ ಕೆಲಸವನ್ನೇ ಮಾಡಿದ್ದಾರೆ. ಇಂತಹ ಕೆಲಸಗಳನ್ನು ಮಾಡುವುದು ನಿಜಕ್ಕೂ ಅಕ್ಷಮ್ಯ ಅಪರಾಧ.

ನನಗೆ ತಿಳಿದಿದೆ ಕೆಲವು ನಟರುಗಳು ಹಾಗೂ ಅವರ ಅಭಿಮಾನಿಗಳ ನಡುವೆ ಅಸಮಾಧಾನವಿದೆ. ನಾನು ದರ್ಶನ್ ಹಾಗೂ ಪುನೀತ್ ಅವರ ಜೀವನವನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಈ ಸಲಿಗೆಯಿಂದಲೇ ಈ ಮಾತುಗಳನ್ನು ನಾನು ಹೇಳುತ್ತಿದ್ದೇನೆ.

ಚಿತ್ರರಂಗದಲ್ಲಿ ನಾನು 27 ವರ್ಷಗಳ ಕಾಲ ಪಯಣವನ್ನು ಮಾಡಿದ್ದೇನೆ. ಪ್ರೀತಿ ಗೌರವವನ್ನು ಹಂಚಬೇಕು ಇದು ನಮಗೆ ಪ್ರತಿಯಾಗಿ ಸಿಗೋದು ಕೂಡ ಹೌದು. ಇವುಗಳಿಂದಲೇ ನಾವು ಪ್ರತಿಯೊಂದು ಸಂಘರ್ಷಗಳನ್ನು ಗೆಲ್ಲಲು ಸಾಧ್ಯ ಎಂಬುದಾಗಿ ಕಿಚ್ಚ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Comment

error: Content is protected !!