Hospet Incident Darshan ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೋದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್(Challenging Star) ದರ್ಶನ್ ಅವರ ಮೇಲೆ ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಎನ್ನಲಾದ ಕೆಲವು ವ್ಯಕ್ತಿಗಳು ಚಪ್ಪಲಿ ಎಸೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈ ಬಗ್ಗೆ ದೊಡ್ಮನೆಯ ಹಿರಿ ಮಗ ಕರುನಾಡ ಚಕ್ರವರ್ತಿ ಶಿವಣ್ಣನಿಂದ ಹಿಡಿದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವರೆಗೆ ಎಲ್ಲರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ತಮ್ಮ ಅಭಿಪ್ರಾಯವನ್ನು ಸೂಚಿಸುತ್ತಾರೆ. ಬೇರೆ ಬೇರೆ ಭಾಷೆಗಳ ಚಾನೆಲ್ಗಳಲ್ಲಿ ಕೂಡ ಈ ಸುದ್ದಿ ಬಿತ್ತರವಾಗಿತ್ತು.
ಇದಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ರೊಚ್ಚಿಗೆದ್ದು ರೋಡಿಗಿಳಿದು ತಮ್ಮ ನಟನ ವಿರುದ್ಧ ಈ ರೀತಿ ಮಾಡಿದವರನ್ನು ಬಂಧಿಸಬೇಕು ಎನ್ನುವುದಾಗಿ ಪ್ರತಿಭಟಿಸುತ್ತಾರೆ. ಆ ಕಡೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಕೂಡ ಸುಖ ಸುಮ್ಮನೆ ಅಪ್ಪು ಅಭಿಮಾನಿಗಳನ್ನು ಇದರಲ್ಲಿ ದೋಷಿಗಳಂತೆ ಪ್ರತಿಬಿಂಬಿಸುವುದನ್ನು ಬಿಟ್ಟು ಬಿಡಿ ಎಂಬುದಾಗಿ ವಾರ್ನಿಂಗ್ (Warning) ನೀಡುತ್ತಾರೆ. ಅದರಲ್ಲೂ ದೊಡ್ಮನೆಯ ಅಭಿಮಾನಿ ಸಂಘಗಳು ಕೂಡ ಫಿಲಂ ಚೇಂಬರ್ (Film Chamber) ಗೆ ಹೋಗಿ ಇದನ್ನು ಇದೇ ರೀತಿ ಮುಂದುವರಿಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದಂತೆ ಮಾಡುತ್ತೇವೆ ಎಂಬುದಾಗಿ ಕೂಡ ಎಚ್ಚರಿಕೆ ನೀಡುತ್ತಾರೆ.
ಆದರೆ ಇದುವರೆಗೂ ಕೂಡ ಆವತ್ತು ದರ್ಶನ್ ಅವರ ಮೇಲೆ ಚಪ್ಪಲಿ ಹೆಸರಿದ್ದು ಯಾರು ಅಥವಾ ಪೊಲೀಸರು ಯಾರನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ ಎನ್ನುವ ಕುರಿತಂತೆ ಸಂಪೂರ್ಣ ಮಾಹಿತಿ ಇದುವರೆಗೂ ಪತ್ತೆ ಆಗಿಲ್ಲ. ಆದರೆ ಈಗ ಕನ್ನಡ ಚಿತ್ರರಂಗದ ಖ್ಯಾತ ಕಳನಟ ಆಗಿರುವ ಆರ್ಮುಗ ರವಿಶಂಕರ್ ಅವರು ಸಂದರ್ಶನ ಒಂದರಲ್ಲಿ ಹೇಳಿರುವ ಹೇಳಿಕೆ(Statement) ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಅವರು ದರ್ಶನ್ ಅವರ ಅಭಿಮಾನಿಗಳೇ ಈ ರೀತಿ ಮಾಡಿದ್ದಾರೆ ಎನ್ನುವಂತೆ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ..ಹಲವಾರು ವರ್ಷಗಳಿಂದ ಗ್ಲಾಮರ್ ಉಳಿಸಿಕೊಂಡು ಬಂದಿರುವ ನಟಿ ಶುಭಪೂಂಜ ಹಾಗೂ ಅವರ ಗಂಡನ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?
ಹೌದು ಮಿತ್ರರೇ, ಸಂದರ್ಶನದಲ್ಲಿ ಮಾತನಾಡುತ್ತಾ ರವಿಶಂಕರ್ ರವರು ಅವರ ಅಭಿಮಾನಿಗಳಿಗಾಗಿಯೇ ದರ್ಶನ್ ಅವರು ಅಷ್ಟೊಂದು ವರ್ಷಗಳ ಕಾಲ ಮುಖಕ್ಕೆ ಬಣ್ಣ ಹಚ್ಚಿ ನಟನೆ ಮಾಡಿ ಅವರ ಮನರಂಜಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ಅವರು ಸೆಲೆಬ್ರಿಟಿಗಳು(Celebrities) ಎಂದು ಹೇಳುವ ಅವರ ಅಭಿಮಾನಿಗಳು ಹೇಗೆ ಮಾಡಿರುವುದು ಅವರ ಮನಸ್ಸಿಗೆ ಖಂಡಿತವಾಗಿ ಬೇಸರ ಮೂಡುವಂತೆ ಮಾಡಿರುತ್ತದೆ ಎಂಬುದಾಗಿ ಹೇಳುತ್ತಾರೆ. ಆರ್ಮುಗ ರವಿಶಂಕರ್ ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.