ಕೋಟಿಗಟ್ಟಲೆ ಬೆಲೆಬಾಳುವ ಮನೆಯನ್ನು ಬಿಟ್ಟು ರವಿಚಂದ್ರನ್ ಬೇರೆ ಮನೆಗೆ ಹೋಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ

ಕ್ರೇಜಿಸ್ಟಾರ್ ಎಂದೆ ಬಿರುದು ಪಡೆದಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ರವಿಚಂದ್ರನ್ ಅವರು ಎನ್ ವೀರಸ್ವಾಮಿ ಅವರ ಪುತ್ರ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಗೀತ ನಿರ್ದೇಶಕರಾಗಿ, ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕದ ಬಣ್ಣ ಬಳಿದು ಸ್ವಂತಿಕೆಯಿಂದ ಮೇಲೆ ಬಂದ ಹೆಗ್ಗಳಿಕೆ ಇವರದು. ನಿರ್ಮಾಪಕರಾಗಿ, ತಂದೆಯ ಪ್ರಾಡಕ್ಷನ್ ಹೌಸ್ ಶ್ರೀ ಈಶ್ವರಿ ಪ್ರೊಡಕ್ಷನ್ ಅನ್ನು ನಡೆಸಿಕೊಂಡು ಬಂದಿದ್ದಾರೆ. ಚಿತ್ರರಂಗದಲ್ಲಿಯೇ ಬದುಕು ಕಟ್ಟಿಕೊಂಡಿರುವ ಇವರಿಗೆ ಅಭಿಮಾನಿಗಳ ಪ್ರಶಂಸೆ ದೊರಕಿದೆ.

ತಮಿಳುನಾಡಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಕಣ್ಮನ ಸೆಳೆದಿದ್ದಾರೆ. ‘ಧೂಮಕೇತು’ ಮತ್ತು ‘ಕುಲಗೌರವ’ದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡು,ನಂತರ ತಮ್ಮದೇ ಚಿತ್ರದಲ್ಲಿ ನಟಿಸಿ ಸಕ್ಸಸ್ ಕಂಡವರು. ಪ್ರೇಮಲೋಕದ ನಂತರ ಇತರ ನಿರ್ದೇಶಕ ನಿರ್ಮಾಪಕರಿಗೂ ಇಷ್ಟವೆನಿಸಿ, ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.ಅಷ್ಟೊ ಇಷ್ಟೋ ಹಣವನ್ನು ಖರ್ಚು ಮಾಡಿ ಹೊಸ ಹೊಸ ತಂತ್ರಜ್ಞಾನಗಳನ್ನು ಪರದೆಯ ಮೇಲೆ ಹೇಗೆ ತರಬಹುದು ಎಂಬುದನ್ನು ಬಹುಶಃ ಇವರನ್ನು ನೋಡಿಯೇ ಎಲ್ಲರೂ ಕಲಿತಿರಬಹುದು.ಶಾಂತಿ ಕ್ರಾಂತಿಯ ಮೂಲಕ ಚಿತ್ರರಂಗದ ಕಾಂತಿಯನ್ನು ಹೆಚ್ಚಿಸಿದವರು. ಹೊಸ ಮಾದರಿಯಲ್ಲಿ ರಿಮೇಕ್ ಮಾಡುವ ಕಲೆ ಇವರಿಗಿತ್ತು. ,

ಡಾಕ್ಟರ್ ರಾಜಕುಮಾರ್, ಅಂಬರೀಶ್, ಡಾಕ್ಟರ್ ವಿಷ್ಣುವರ್ಧನ್ ಇಂತಹ ಸ್ಟಾರ್ ನಟರ ಚಿತ್ರಗಳ ನಡುವೆಯೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳು ತೆರೆಕಂಡು ಇವರಿಗೆ ಒಳ್ಳೆಯ ಲಾಭಗಳಿಸಿ ಕೊಟ್ಟಿತ್ತು. ಹೊಸಹೊಸ ವಿಭಿನ್ನ ಚಿತ್ರಗೀತೆಗಳ ಮೂಲಕ ಜನಮನ ಗೆದ್ದ ನಟ ಇವರು. ಇತ್ತೀಚಿಗೆ ದೊಡ್ಡ ಲಾಭ ಗಳಿಸಿರುವ ಚಿತ್ರಗಳನ್ನು ಕಾಣದ ಇವರು ಇದೀಗ ರಾಜಾಜಿನಗರದಲ್ಲಿರುವ ತಮ್ಮ ಕನಸಿನ ಮನೆಯನ್ನು ಖಾಲಿ ಮಾಡಿದ್ದಾರೆ. ಹೊಸಕೆರೆ ಹಳ್ಳಿಯಲ್ಲಿರುವ ತಮ್ಮ ಇನ್ನೊಂದು ಮನೆಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಸೋಲು ಗೆಲುವಿನ ನಡುವೆಯೂ ರಾಜಾಜಿನಗರದ ಮನೆಯಲ್ಲಿಯೇ ವಾಸಿಸುತ್ತಿದ್ದ ನಟ ರವಿಚಂದ್ರನ್ ಅವರು ತಮ್ಮ ಮಗ ಮತ್ತು ಮಗಳ ಮದುವೆಯನ್ನು ಅದ್ದೂರಿಯಾಗಿಯೇ ಮಾಡಿದ್ದರು. ಇದೀಗ ಶಿಫ್ಟ್ ಆಗಿರಲು ಕಾರಣ ಮನೆಯನ್ನೊಮ್ಮೆ ನವೀಕರಣಗೊಳಿಸಬೇಕಂತೆ. ಆಪ್ತರ ಸಲಹೆಯ ಮೇರೆಗೆ ಮನೆಯಲ್ಲಿರುವ ವಾಸ್ತುದೋಷಗಳನ್ನು ಸರಿಪಡಿಸಬೇಕಂತೆ. ಸ್ವಲ್ಪ ದಿನದ ಮಟ್ಟಿಗೆ ಹೊಸಕೆರೆಹಳ್ಳಿಯಲ್ಲಿರುವ ಮನೆಯಲ್ಲಿಯೇ ಉಳಿದು, ತಮ್ಮ ಕನಸಿನ ಮನೆಯನ್ನು ನವೀಕರಣಗೊಳಿಸುತ್ತಾರಂತೆ.

Leave a Comment

error: Content is protected !!