ರವಿಚಂದ್ರನ್ ಅವರು ಮಾರಿದ ಮನೆಯನ್ನು ಹಿಂಪಡೆಯೋದು ಪಕ್ಕಾ. ಈ ಅದೃಷ್ಟ ಕೈ ಹಿಡಿದಿದ್ದು ಹೇಗೆ ಗೊತ್ತಾ ?

ರವಿಚಂದ್ರನ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯ ಮೂಲಕ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದರು. ಸೋತು ನಿಂತಾಗ ನಗುವವರ ಮಾತಿಗೆ ಕಿವಿಗೊಡದೆ, ವೇದಿಕೆಯಲ್ಲಿ ‘ಹಣ ಕಳೆದುಕೊಂಡಿದ್ದಕ್ಕಾಗಿ ಯಾವುದೇ ಬೇಸರವಿಲ್ಲ’ ಎಂದು ಹೇಳಿದ್ದಾರೆ. ವಿಭಿನ್ನ ಕಥೆಗಳನ್ನು ತೆರೆಯ ಮೇಲೆ ತೋರಿಸುವ ಮೂಲಕ ಕರುನಾಡ ಜನತೆಗೆ ಮನರಂಜನೆಯನ್ನು ನೀಡಿ, ಅವರ ಮನಸ್ಸನ್ನು ಗೆಲ್ಲಬೇಕೆಂಬುದೇ ತಮ್ಮ ಆಶಯವೆಂದಿದ್ದಾರೆ. ಸಿನಿಮಾಕ್ಕಾಗಿ ಹಣವನ್ನು ಸುರಿದು ತಮ್ಮ ಕನಸಿನ ಮನೆಯನ್ನು ಮಾರಿ ನಿಂತ ರವಿಚಂದ್ರನ್ ಅವರು ಮುಂದೆ ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿ ಪ್ರೇಕ್ಷಕರ ಸಂತೋಷಪಡಿಸುವುದಾಗಿ ಕಣ್ಣಲ್ಲಿ ನೀರು ತುಂಬಿ ಹೇಳಿದ್ದರು.

ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ಕೇವಲ ನಟರಷ್ಟೇ ಅಲ್ಲ. ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಬರಹಗಾರ, ಹಾಡುಗಾರರು ಹೌದು. ಕನ್ನಡ ಚಿತ್ರರಂಗದಲ್ಲಿ ‘ಪ್ರೇಮಲೋಕ’ವನ್ನೇ ಸೃಷ್ಟಿಸಿ, ಹೊಸಹೊಸ ಹಾಡುಗಳ ‘ಸಂಗ್ರಾಮ’ದ ಅಲೆ ಹಬ್ಬಿಸಿ, ಕೋಟಿ ಕನ್ನಡಿಗರ ಮನ ಗೆದ್ದ ‘ರಣಧೀರ’. ಸೋಲು ಗೆಲುವುಗಳ ಪರಿಚಯವಿರುವ ‘ಅಂಜದಗಂಡು’. ‘ಕಿಂದರಿ ಜೋಗಿ’ಯಾಗಿ ಜಾದು ಮಾಡಿದ್ದಲ್ಲದೆ, ‘ಶಾಂತಿ ಕ್ರಾಂತಿ’ಯಿಂದ ಅದ್ದೂರಿ ಸಿನಿಮಾದ ಝಲಕ್ ಕನ್ನಡಿಗರಿಗೆ ಉಣಿಸಿರುವವರು. ಹಲವಾರು ಚಿತ್ರಗಳ ಮೂಲಕ ಮೆಚ್ಚುಗೆ ಪಡೆದ ‘ಕಲಾವಿದ’ ಈ ‘ಚೆಲುವಾ’.

ರಾಜಾಜಿನಗರದಲ್ಲಿರುವ ಮನೆಯನ್ನು ಖಾಲಿ ಮಾಡಿರುವ ಕಾರಣವನ್ನು ವೇದಿಕೆಯಲ್ಲಿ ಹೇಳಿಕೊಂಡಾಗಲೇ ಇವರು ಕಷ್ಟದಲ್ಲಿದ್ದಾರೆ ಎಂಬುದು ಚಂದನವನದ ನಟ, ನಟಿ, ಕಲಾವಿದರ ಗಮನಕ್ಕೆ ಬಂದಿದ್ದು. ಇತ್ತೀಚಿಗೆ ಇವರು ನಿರ್ಮಾಣ ಮಾಡುತ್ತಿರುವ, ನಟಿಸುತ್ತಿರುವ ಚಿತ್ರಗಳು ಸಕ್ಸೆಸ್ ಕಂಡಿಲ್ಲ. ಸೊಲುಂಡರೂ ಸಿನಿಮಾದಿಂದಲೇ ಗೆಲ್ಲುತ್ತೇನೆ ಎಂಬ ಛಲದಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವಿಚಾರವು ತಿಳಿಯುತ್ತಿದ್ದಂತೆಲೇ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹೀರೋ ಶಿವಣ್ಣ, ಅಶ್ವಿನಿ ಪುನೀತ್ ರಾಜಕುಮಾರ್, ಯಶ್ ಸೇರಿದಂತೆ ಹಲವು ಕನ್ನಡ ಕಲಾವಿದರು ರವಿಚಂದ್ರನ್ ಅವರನ್ನು ಭೇಟಿ ಮಾಡಿ, ‘ನಿಮ್ಮ ಜೊತೆಗೆ ನಾವೆಲ್ಲರೂ ಇದ್ದೇವೆ. ಎಲ್ಲವೂ ಸರಿ ಹೋಗುತ್ತವೆ. ಮುಂದೆ ನಿಮ್ಮ ಚಿತ್ರವು ಗೆಲ್ಲುತ್ತದೆ. ನಾವೆಲ್ಲರೂ ಇದಕ್ಕಾಗಿ ಪ್ರಯತ್ನಿಸುತ್ತೇವೆ’ ಎಂದು ಧೈರ್ಯ ತುಂಬಿ, ಕೈಲಾದ ಸಹಾಯ ಮಾಡಿ ತೆರಳಿದ್ದಾರೆ.

ಇವರೆಲ್ಲರೂ ಹೇಳಿದಂತೆಯೇ ಎಲ್ಲವೂ ಸರಿ ಹೋಗುವ ಸಮಯ ಬಂದಿದೆ. ಮಾರಿದ ಮನೆಯನ್ನು ಮರಳಿ ಪಡೆಯುವ ಮಹದಾಸೆಯು ಈಡೇರಲಿದೆ. ಕಿಚ್ಚ ಸುದೀಪ್, ಯಶ್, ದರ್ಶನ್, ಅಶ್ವಿನಿ ಪುನೀತ್ ರಾಜಕುಮಾರ್ ಎಲ್ಲರೂ ರವಿಚಂದ್ರನ್ ಅವರ ಹೆಗಲಾಗಿ ನಿಂತಿದ್ದು, ಮುಂಬರುವ ಶಿವರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಒಂದು ಪಾತ್ರವನ್ನು ರವಿಚಂದ್ರನ್ ಅವರಿಗೆ ಮೀಸಲಿಡಲಾಗುತ್ತಂತೆ. ಅಲ್ಲದೆ ರವಿಚಂದ್ರನ್ ಅವರು ನಿರ್ಮಾಣ ಮಾಡುವ ಚಿತ್ರಗಳಿಗೆ ಎಲ್ಲ ಟಾಪ್ ನಟ ನಟಿಯರಿಂದ ಉಚಿತ ಪ್ರಚಾರ ಸಿಗಲಿದೆಯಂತೆ. ಒಟ್ಟಿನಲ್ಲಿ ಚಂದನವನವೇ ಒಟ್ಟಾಗಿ ನಿಂತು ರವಿಚಂದ್ರನ್ ಅವರ ಕಷ್ಟಗಳನ್ನು ಹೊಡೆದೋಡಿಸಿ, ಕನಸನ್ನು ನನಸು ಮಾಡಲಿದೆ.

Leave a Comment

error: Content is protected !!