ದಸರಾ ವೇದಿಕೆ ಮೇಲೆ ಅಪ್ಪು ಹೆಸರು ಹೇಳಿ ಎಡವಟ್ಟು ಮಾಡಿಕೊಂಡ ರಾಮ್ ಕುಮಾರ್ ಮಗ. ಡಿ ಬಾಸ್‌ ಅಭಿಮಾನಿಗಳಿಂದ ಆಕ್ರೋಶ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರರಂಗದ ಹೊರಗೆ ಕೂಡ ಅತ್ಯುತ್ತಮ ಗೆಳೆಯರಾಗಿದ್ದರು. ಆದರೆ ಈಗ ಅವರ ಅಭಿಮಾನಿಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಎಡಬಿಡದಂತೆ ಕಿತ್ತಾಡುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದಸರಾ ಕಾರ್ಯಕ್ರಮದಲ್ಲೇ ಕೂಡ ಇದು ಕಂಡುಬಂದಿತ್ತು.

ಕನ್ನಡ ಚಿತ್ರರಂಗದ ಯುವ ನಟನಾಗಿ ಕಾಣಿಸಿಕೊಂಡಿದ್ದ ರಾಮ್ ಕುಮಾರ ಅವರ ಮಗ ಧೀರೆನ್ ರಾಮ್ ಕುಮಾರ್ ಅವರು ಈಗ ದಸರಾ ಕಾರ್ಯಕ್ರಮದಲ್ಲಿ ಮಾಡಿಕೊಂಡಿರುವ ಎಡವಟ್ಟು ಈ ಕಿತ್ತಾಟಕ್ಕೆ ಈಗ ನಿಜರೂಪದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ತುಪ್ಪ ಸುರಿದಂತಿದೆ. ಅಷ್ಟಕ್ಕೂ ಧೀರೇನ್ ರಾಮ್ ಕುಮಾರ್ ದಸರಾ ಕಾರ್ಯಕ್ರಮದಲ್ಲಿ ಮಾಡಿಕೊಂಡಿರುವ ಎಡವಟ್ಟೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ, ದಸರಾ ಕಾರ್ಯಕ್ರಮದಲ್ಲಿ ಜನರು ಡಿ ಬಾಸ್ ರವರ ಬಾವುಟಗಳನ್ನು ಹಿಡಿದುಕೊಂಡು ಯಾರೇ ಬಂದರೂ ಯಾರೇ ಹೋದರು ಡಿ ಬಾಸ್ ಡಿ ಬಾಸ್ ಎಂಬುದಾಗಿ ಕೂಗುತ್ತಲೆ ಇದ್ದರು. ಅಷ್ಟೊಂದು ಜನಪ್ರಿಯತೆ ಅಷ್ಟೊಂದು ಸಹಸ್ರಾರು ಜನರ ನಡುವೆ ಡಿ ಬಾಸ್ ಅವರಿಗಾಗಿ ಇತ್ತು. ಇದನ್ನು ನೋಡುತ್ತಿದ್ದ ನಟಿ ಹರ್ಷಿಕ ಪೂಣಚ್ಚ ಅವರು ತಮ್ಮ ಪರ್ಫಾರ್ಮೆನ್ಸ್ ಆದ ನಂತರ ವೇದಿಕೆ ಮೇಲೆ ಬಂದಿದ್ದಾಗ ಆಯ್ತಪ್ಪ ಒಂದ್ಸಲ ಎಲ್ರೂ ಡಿ ಬಾಸ್ ಹೆಸರನ್ನು ಜೋರಾಗಿ ಹೋಗಿ ಎಂಬುದಾಗಿ ಹೇಳಿದಾಗ ಸಹಸ್ರಾರು ಜನರಿರುವ ಕ್ರೌಡ್ ನಡುವೆ ಎಲ್ಲರೂ ಕೂಡ ಡಿ ಬಾಸ್ ಡಿ ಬಾಸ್ ಎನ್ನುವುದಾಗಿ ಜೋರಾಗಿ ಜಯಭೋಷವನ್ನು ಕೂಗಲು ಪ್ರಾರಂಭಿಸುತ್ತಾರೆ.

https://twitter.com/DBOSSFANSOFFIC5/status/1580008054665646080?t=Vdx_YzYyljtlxhIJqCl2GQ&s=19

ಇದನ್ನು ನೋಡಿದ ಧೀರೇನ್ ರಾಮ್ ಕುಮಾರ್ ಅವರು ಎಲ್ಲರೂ ಒಮ್ಮೆ ಅಪ್ಪು ಎನ್ನುವುದಾಗಿ ಜೋರಾಗಿ ಕೂಗಿ ಎಂಬುದಾಗಿ ಮೈಕ್ ಹಿಡಿದು ಹೇಳುತ್ತಾರೆ. ಇದು ಈಗ ಡಿ ಬಾಸ್ ಅಭಿಮಾನಿಗಳಲ್ಲಿ ಅಸಮಾಧಾನವನ್ನು ಮೂಡಿಸಿದ್ದು ನಮ್ಮ ನೆಚ್ಚಿನ ನಟನ ಹೆಸರನ್ನು ಹೇಳಿದ್ದು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕಾಗಿ ಧೀರೇನ್ ರಾಮಕುಮಾರ್ ಈ ರೀತಿ ಹೇಳಿದ್ದಾರೆ ಎಂಬುದಾಗಿ ಭಾವಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಇದರ ಕುರಿತಂತೆ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!