Puneeth Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಪರ್ಫೆಕ್ಟ್ ಆಲ್ರೌಂಡರ್(All Rounder) ಆಗಿದ್ದರು ಎಂದರೆ ತಪ್ಪಾಗಲಾರದು. ನಟನೆ ನೃತ್ಯ ಹಾಗೂ ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್(Dupe) ಇಲ್ಲದೆ ಭಾಗವಹಿಸುವುದು ಅಪ್ಪು ಅವರ ವಿಶೇಷತೆಯನ್ನು ಉಳಿದೆಲ್ಲ ನಟರಿಗಿಂತ ವಿಭಿನ್ನವಾಗಿ ಕಾಣಿಸುವಂತೆ ಮಾಡುತ್ತಿತ್ತು. ಇದಕ್ಕಾಗಿ ಅವರ ಅಭಿಮಾನಿಗಳಲ್ಲಿ ಅಪ್ಪು ಅವರ ಬಗ್ಗೆ ವಿಶೇಷವಾದ ಪ್ರೀತಿ ಹಾಗೂ ಗೌರವ ಇತ್ತು. ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ.
ಆದರೆ ಆ ಕಹಿ ಸತ್ಯವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ಪರದೆಯ ಮೇಲೆ ಹೀರೋ ಮಾತ್ರವಲ್ಲದೇ ನಿಜ ಜೀವನದಲ್ಲಿ ಕೂಡ ಕಷ್ಟದಲ್ಲಿರುವವರಿಗೆ ಯಾವುದೇ ಪ್ರಚಾರವಿಲ್ಲದೆ ಸಹಾಯ ಮಾಡುವ ಮೂಲಕ ಅವರ ಜೀವನದಲ್ಲಿ ನಿಜವಾದ ದೇವರಾಗಿ ಕಂಡುಬಂದಿದ್ದರು. ಅದಕ್ಕಾಗಿ ಅವರ ಸಾಧನೆಗಳನ್ನು ಗುರುತಿಸಿ ಅವರಿಗೆ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿತ್ತು. ಇನ್ನು ಅವರ ಬಗ್ಗೆ ಕೆಲವೊಂದು ವಿಚಾರಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ನಿಮಗೆ ತಿಳಿ ಹೇಳಲು ಹೊರಟಿದ್ದೇವೆ.
ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ನಟನಾಗಿ ಮಾತ್ರವಲ್ಲದೇ ಒಬ್ಬ ಗಾಯಕನಾಗಿ ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರ ತಂದೆ ಆಗಿರುವ ಡಾಕ್ಟರ ರಾಜಕುಮಾರ್ ಅವರು ಕೂಡ ನಟನೆಯ ಜೊತೆಗೆ ಹಾಡನ್ನು ಕೂಡ ಹಾಡುತ್ತಿದ್ದರು. ಇನ್ನು ಅಪ್ಪು ಅವರ ವಿಶೇಷತೆ ಏನೆಂದರೆ ಅವರು ಕೇವಲ ಹಾಡೋದು ಮಾತ್ರವಲ್ಲದೆ ಅದಕ್ಕಾಗಿ ಪಡೆಯುವ ದುಬಾರಿ ಸಂಭಾವನೆಯನ್ನು(Remuneration) ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಸಂಪೂರ್ಣವಾಗಿ ವಿನಯೋಗಿಸುತ್ತಿದ್ದರು. ಇದಕ್ಕಾಗಿ ಅವರು ಬೇರೆ ಎಲ್ಲರಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.
ಇನ್ನು ಜಾಹೀರಾತಿನಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜಾಹಿರಾತಿನಲ್ಲಿ ಕಾಣಿಸುತ್ತಿದ್ದ ನಟರಲ್ಲಿ ಅಪ್ಪು ಅವರು ಕೂಡ ಒಬ್ಬರಾಗಿದ್ದರು. ಇನ್ನು ಅವರು ಒಂದು ಜಾಹೀರಾತಿಗಾಗಿ(Advertisement) ಭರ್ಜರಿ ನಾಲ್ಕು ಕೋಟಿ ರೂಪಾಯಿಗಳನ್ನು ಸಂಭಾವನೆಯ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. ಈ ಹಣವನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಖಂಡಿತವಾಗಿ ಒಳ್ಳೆಯ ಕೆಲಸಕ್ಕಾಗಿ ವಿನಯೋಗಿಸುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.