Dboss ದರ್ಶನ್ ಪರ ನಿಲ್ಲಲ್ವಂತೆ ಒಳ್ಳೆ ಹುಡುಗ ಪ್ರಥಮ್, ಯಾಕೆ ಗೊತ್ತಾ?

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯಕ್ಕೆ ಸಾಕಷ್ಟು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಯಾರೋ ಕಿ’ಡಿಗೇಡಿಗಳಿಂದ ಚಪ್ಪಲಿ ಎಸೆತದ ಅವ’ಮಾನವನ್ನು ಅನುಭವಿಸಿದ್ದರು. ಇದು ಕೇವಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮಾತ್ರವಲ್ಲದೆ ನಮ್ಮ ಕನ್ನಡ ಚಿತ್ರರಂಗಕ್ಕೆ(Kannada Film Industry) ಕೂಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.

ಈ ಸಂದರ್ಭದಲ್ಲಿ ಹೀಗೆ ಮಾಡಿದ್ದು ಅಪ್ಪು ಅಭಿಮಾನಿಗಳು ಎನ್ನುವುದಾಗಿ ಹೇಳಲಾಯಿತು. ಯಾರೇ ಮಾಡಿರಲಿ ಇದು ತಪ್ಪು ತಪ್ಪೇ ಎಂಬುದಾಗಿ ಇಡೀ ಕನ್ನಡ ಚಿತ್ರರಂಗವೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬೆಂಬಲವಾಗಿ ನಿಂತಿತ್ತು. ಅದರಲ್ಲಿ ವಿಶೇಷವಾಗಿ ಕನ್ನಡ ಚಿತ್ರರಂಗದ ಲೀಡರ್(Leader) ಹಾಗೂ ದೊಡ್ಡಮನೆಯ ಹಿರಿಮಗ ಆಗಿರುವ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ದೊಡ್ಡ ಮಟ್ಟದಲ್ಲಿ ಈ ವಿಚಾರವನ್ನು ಖಂಡಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.

ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಳ್ಳೆ ಹುಡುಗ ಪ್ರಥಮ್ ಆಗಾಗ ತಮ್ಮ ತರಲೇ ಹೇಳಿಕೆಗಳಿಂದಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೇ ಸಂದರ್ಶನ ಹೊಂದಿರಲಿ ಒಳ್ಳೆ ಹುಡುಗ ಪ್ರಥಮ್ ಭಾಗವಹಿಸಿದ ಸಂದರ್ಭದಲ್ಲಿ ಈ ವಿಚಾರದ ಕುರಿತಂತೆ ಮಾತನಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ(Social Media) ಅಭಿಮಾನಿಗಳು ಯಾಕೆ ದರ್ಶನ್ ಅವರ ಪರವಾಗಿ ನೀವು ನಿಂತಿಲ್ಲ ಎಂಬುದಾಗಿ ಕೇಳುತ್ತ ಇರುತ್ತಾರೆ ಅದಕ್ಕೆ ನಾನು ದರ್ಶನ್ ಅವರ ಪರವಾಗಿ ನಾನು ನಿಲ್ಲಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಮೊದಲಿಗೆ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಅಭಿಮಾನಿಗಳು ಪ್ರಥಮ್ ಅವರ ವಿರುದ್ಧ ಅಸಮಾಧಾನವನ್ನು ಹೊರ ಹಾಕುತ್ತಾರೆ ಆದರೆ ನಂತರ ಪ್ರಥಮ್ ಅವರು ಇದರ ಬಗ್ಗೆ ತಮಾಷೆಯಾಗಿ ಹೇಳಿಕೆ ನೀಡಿರುವುದನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಹೌದು ಇದನ್ನು ಇನ್ನಷ್ಟು ವಿವರಿಸಿ ಹೇಳುತ್ತಾ ಪ್ರಥಮ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಷ್ಟೊಂದು ಉದ್ದ ಇದ್ದಾರೆ ಅವರ ಜೊತೆ ನಿಲ್ಲಲು ನನಗೆ ಕಾಲು ನೋ’ವು ಬರುತ್ತದೆ ಎಂಬುದಾಗಿ ಅಣಕ ಮಾಡುವಂತೆ ಮಾತನಾಡುತ್ತಾರೆ. ಪ್ರಥಮ್ ಅವರ ಈ ಪ್ರತಿಕ್ರಿಯೆಗೆ ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ(Mixed Reaction) ಬರುತ್ತಿದ್ದು ಒಬ್ಬ ನಟನ ಕುರಿತಂತೆ ಮಾತನಾಡುವಾಗ ಹೀಗೆ ಉಡಾಫೆ ಯಾಗಿ ಮಾತನಾಡುವುದು ಸರಿಯಲ್ಲ ಎಂಬುದಾಗಿ ಹೇಳುತ್ತಿದ್ದಾರೆ.

Leave a Comment

error: Content is protected !!