ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ನಟಿ ಪವಿತ್ರ ಲೋಕೇಶ್ ಅವರು ಗುಪ್ತಗಾಮಿನಿ ಒಲವೇ ನಮ್ಮ ಬದುಕು ಅರಮನೆ ಗಿಳಿ ಸೇರಿದಂತೆ ಹಲವಾರು ಧಾರವಾಹಿಗಳಲ್ಲಿಯೂ ನಟಿಸಿ ಕಿರುತೆರೆಯಲ್ಲಿಯೂ ಮಿಂಚಿದವರು ದಕ್ಷಿಣ ಭಾರತದ ಮನೆ ಮಂದಿಗೆಲ್ಲರಿಗೂ ಇವರು ಚಿರಪರಿಚಿತರು.
Pavithra lokesh filed police complaint on youtubers and website
ಈಗೀಗ ಪವಿತ್ರ ಲೋಕೇಶ್ ಅವರು ದಾರಾವಾಹಿ ಸಿನಿಮಾಗಳ ಸುದ್ದಿಯಲ್ಲಲ್ಲದೇ, ವೈಯಕ್ತಿಕ ವಿಚಾರ, ವಿವಾದಗಳಿಗೆ ಸುದ್ದಿಯಾಗಿದ್ದಾರೆ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರ ಮಧ್ಯೆ ಏನೋ ನಡೆಯುತ್ತಿದೆ ಎಂದು ಗುಸು ಗುಸು ಸುದ್ದಿ ಹಬ್ಬಿತ್ತು. ಇನ್ನು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರು ಮೈಸೂರಿನ ಹೋಟೆಲ್ ಒಂದರಲ್ಲಿ ತಂಗಿದ್ದಾಗ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಸ್ಥಳಕ್ಕೆ ಆಗಮಿಸಿ, ಪವಿತ್ರ ಲೋಕೇಶ್ ಹಾಗೂ ನರೇಶ್ ವಿರುದ್ಧ ಕಿಡಿ ಕಾರಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕಲಹವನ್ನು ನಿಲ್ಲಿಸಿ, ಪವಿತ್ರ ಲೋಕೇಶ್ ಅವರನ್ನು ಕಾರಿನಲ್ಲಿ ಕಳುಹಿಸಿಕೊಟ್ಟಿದ್ದರು.
ನರೇಶ್ ಅವರೊಂದಿಗಿನ ಸಂಬಂಧದ ವಿಚಾರವಾಗಿಯೇ ಪವಿತ್ರ ಲೋಕೇಶ್ ಅವರ ಸುದ್ದಿಯು ಬಹಳಷ್ಟು ಕೇಳಿ ಬರುತ್ತಿದೆ. ಇದೀಗ ಬಹು ಭಾಷಾ ನಟಿ ಪವಿತ್ರ ಲೋಕೇಶ್ ಅವರು ಪೊಲೀಸರ ಮೊರೆ ಹೋಗಿದ್ದು, ನನ್ನ ವಯಕ್ತಿಕ ವಿಚಾರಗಳ ಕುರಿತು ತಪ್ಪು ಹೇಳಿಕೆಗಳನ್ನು ನೀಡಿದವರ ವಿರುದ್ಧ ದೂರು ನೀಡಿದ್ದಾರಂತೆ.
‘ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನರೇಶ್ ಅವರ ಫೋಟೋಗಳನ್ನು ಮಾರ್ಫ್ ಮಾಡಿ ಹರಿಬಿಟ್ಟಿದ್ದು, ಮಾನಸಿಕ ಕಿರುಕುಳವಾಗುತ್ತಿದೆ. ಕೆಲವು ವೆಬ್ಸೈಟ್ಗಳು ಹಾಗೂ ಯೌಟ್ಯೂಬ್ ಚಾನೆಲ್ ಗಳು ನನ್ನ ವಿರುದ್ಧ ದುರುದ್ದೇಶ ಪೂರ್ವಕ ಅಪಪ್ರಚಾರ ಮಾಡುತ್ತಿವೆ. ಮಾರ್ಫಿಂಗ್ ನ ಮೂಲಕ ಮಾನಹಾನಿ ಮಾಡುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರಿಗೆ ಇಮೇಲ್ ನ ಮೂಲಕ ದೂರು ನೀಡಿದ್ದಾರಂತೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಿದ್ದಾರಂತೆ. ಸೈಬರ್ ಕ್ರೈಂ ಪೊಲೀಸರು ಪವಿತ್ರ ಲೋಕೇಶ್ ನೀಡಿರುವ ದೂರಿನ ಹಿನ್ನೆಲೆಯನ್ನು ಪರೀಕ್ಷಿಸಿ, ಪ್ರಕರಣವನ್ನು ಬಗೆಹರಿಸಲಿದ್ದಾರಂತೆ.