ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಚಿತ್ರಕ್ಕೆ ನಾಯಕಿಯಾಗಿ ನಟಿಸಬೇಕಿದ್ದ ಮಾಲಾಶ್ರೀ ಮಗಳು, ಡಿ ಬಾಸ್ ಚಿತ್ರವನ್ನು ಬಿಟ್ಟು ಧ್ರುವ ಸರ್ಜಾ ಅವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?

ನಮಗೆಲ್ಲರಿಗೂ ತಿಳಿದಿರುವ ಹಾಗೆ 1990ರ ಆಸು ಪಾಸಿನ ಇಸ್ವಿಗಳಲ್ಲಿ ಬಹು ಬೇಡಿಕೆಯ ನಟಿಯಾಗಿ ಮೆರೆದವರು ಮಾಲಾಶ್ರೀ ಅವರು. ಪಡ್ಡೆ ಹುಡುಗರ ನಿದ್ದೆಗೆಡಿಸಿದ ಇವರನ್ನು ‘ಕನಸಿನ ರಾಣಿ’ ಎಂಬ ಬಿರುದಿನೊಂದಿಗೆ ಕರೆಯಲಾಗುತ್ತಿತ್ತು. ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಇವರು ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

‘ನಂಜುಂಡಿ ಕಲ್ಯಾಣ’ದಿಂದ ಹಿಡಿದು ‘ಉಪ್ಪು ಹುಳಿ ಕಾರ’ ಚಿತ್ರದವರೆಗಿನ ಇವರ ಕನ್ನಡ ಚಿತ್ರರಂಗದ ಪ್ರಯಾಣವನ್ನು ನೋಡಿದರೆ ಪ್ರೇಮ ಕಥೆಯ ನಾಯಕಿಯಾಗಿ, ಹಳ್ಳಿಯ ಮುಗ್ಧ ಹುಡುಗಿಯಾಗಿ, ಖಡಕ್ ಪೊಲೀಸ್ ಆಫೀಸರ್ ಆಗಿ, ಕೆಟ್ಟವರ ಎದುರು ಹೆದರದೆ ಹೋರಾಡುವ ಹೆಣ್ಣು ಮಗಳಾಗಿ ಸಾಮಾನ್ಯವಾಗಿ ಎಲ್ಲ ಪಾತ್ರಗಳಲ್ಲಿಯೂ ಕಾಣಸಿಗುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಸುಂದರ ಕಥೆಗಳನ್ನು ತೆರೆಯ ಮೇಲೆ ತಂದು, ಗೆಲ್ಲಿಸಲು ಶ್ರಮಿಸಿದ ಪ್ರಸಿದ್ಧ ನಿರ್ಮಾಪಕರಾದ ಕೋಟಿ ರಾಮ್ ಅವರನ್ನು ಮಾಲಾಶ್ರೀ ಅವರು ವಿವಾಹವಾದ ಬಳಿಕ ರಾಧನಾ ಎಂಬ ಮುದ್ದು ಮಗಳನ್ನು ಪಡೆಯುತ್ತಾರೆ. ಇದೀಗ ರಾಧನ ಚಿತ್ರರಂಗವನ್ನು ಪ್ರವೇಶಿಸಲಿದ್ದು ಸ್ಟಾರ್ ನಟರ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ರಾಧನ ಅವರು ಕೂಡ ಅಮ್ಮನಂತೆಯೇ ಸಿನಿಮಾರಂಗದಲ್ಲಿ ಆಸಕ್ತಿಯನ್ನು ಹೊಂದಿದ್ದು, ಅದಕ್ಕಾಗಿ ಮುಂಬೈಗೆ ತೆರಳಿ ಸಿನಿಮಾ ಪ್ರವೇಶಕ್ಕೆ ಮುನ್ನವೇ ಕೋಚಿಂಗ್ ಗಳನ್ನು ಪಡೆದು ಸಿದ್ದಳಾಗಿ ಬಂದಿದ್ದಾಳಂತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂಬರುವ ಡಿ 56 ಚಿತ್ರದಲ್ಲಿ ನಾಯಕಿಯಾಗಿ ರಾಧನ ಆಯ್ಕೆಯಾಗಿದ್ದಾಳೆ ಎಂಬ ಸುದ್ದಿಯು ಚಿತ್ರತಂಡದಿಂದಲೇ ಅಧಿಕೃತವಾಗಿ ಹೇಳಲ್ಪಟ್ಟಿತ್ತು. ತರುಣ್ ಸುಧೀರ್ ನಿರ್ದೇಶಿಸಲಿರುವ ಈ ಚಿತ್ರದಲ್ಲಿ ರಾಧನಾ ದರ್ಶನ್ ಅವರೊಂದಿಗೆ ನಾಯಕಿಯಾಗಿ ಮಿಂಚಲಿದ್ದಾಳೆ ಎಂಬುದು ತಿಳಿದ ವಿಷಯ.

ದರ್ಶನ್ ಅವರೊಂದಿಗೆ ನಟಿಸಲು ಆಯ್ಕೆಯಾಗುತ್ತಿದ್ದಂತಲೇ ಅದೃಷ್ಟವೆಂಬಂತೆ ಇನ್ನೊಬ್ಬ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾಗಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ‘ಅದ್ದೂರಿ’ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ‘ಬಹದ್ದೂರ್’ ಗಂಡಾಗಿ ಮೆರೆದು, ‘ಭರ್ಜರಿ’ ಸೌಂಡು ಮಾಡಿದ ಧ್ರುವ ಸರ್ಜಾ ಅವರ ಕೇಡಿ ಚಿತ್ರಕ್ಕಾಗಿ ನಟಿಸಲು ರಾಧನಾ ಅವರಿಗಾಗಿ, ಅವರ ತಾಯಿ ಮಾಲಾಶ್ರೀಯವರನ್ನು ಒಪ್ಪಿಸಲಾಗಿತ್ತು..

ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕೇಡಿ ಚಿತ್ರದಲ್ಲಿ ರಾಧನಾ ಅವರು ಕಾಣಿಸಿಕೊಳ್ಳಲಿದ್ದಾರೆ. ಚೊಚ್ಚಲ ಚಿತ್ರಗಳಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಅವರೊಂದಿಗೆ ನಟಿಸಲು ಅವಕಾಶ ದೊರಕಿರುವುದು ರಾಧನಾ ಅವರ ಅದೃಷ್ಟವೇ ಸರಿ.

Leave a Comment

error: Content is protected !!