ಕನ್ನಡ ಚಿತ್ರರಂಗದಲ್ಲಿ ಕಲರ್ ಮುಖ್ಯವಲ್ಲ ನಟಿಸುವ ಕೌಶಲ್ಯ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು ನಟ ರಘುವೀರ್. ಹುಟ್ಟುವಾಗ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು ನಟ ರಘುವೀರ್. ಕನ್ನಡ ಚಿತ್ರರಂಗದ ಆರಂಭಿಕ ದಿನಗಳಲ್ಲಿ ಎಲ್ಲರಿಂದ ಅವಮಾನಕ್ಕೆ ಒಳಗಾಗುತ್ತಾರೆ ಆದರೆ ನಂತರ ಸೋಲೆ ಗೆಲುವಿನ ಸೋಪಾನ ಎನ್ನುವಂತೆ ಗೆಲುವಿನ ಹಾದಿಯನ್ನು ಕಂಡುಹಿಡಿಯುತ್ತಾರೆ.
ಇವರು ನಟಿಸುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತವೆ. ತಮ್ಮ ಸೂಪರ್ ಹಿಟ್ ಸಿನಿಮಾ ಶೃಂಗಾರ ಕಾವ್ಯ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಸಿಂಧೂ ಅವರನ್ನೇ ಕುಟುಂಬಸ್ಥರ ವಿರೋಧದ ನಡುವೆ ಕೂಡ ಪ್ರೀತಿಸಿ ಮದುವೆಯಾಗುತ್ತಾರೆ. ಕುಟುಂಬದಿಂದ ಹೊರಬಂದ ಕಾರಣ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತದೆ.
ನಂತರ ನಟಿ ಸಿಂಧು ಅವರಿಗೆ ತಮಿಳಲ್ಲಿ ಅವಕಾಶಗಳು ಹೆಚ್ಚಾಗಿ ಬಂದ ಕಾರಣ ಚೆನ್ನೈಗೆ ಶಿಫ್ಟ್ ಆಗುತ್ತಾರೆ. ಈ ಸಂದರ್ಭದಲ್ಲಿ ರಘುವೀರ್ ಅವರಿಗೆ ಅವಕಾಶಗಳು ಕೂಡ ಸಂಪೂರ್ಣವಾಗಿ ಕಡಿಮೆ ಆಗಿರುತ್ತವೆ. ಈ ಸಮಯದಲ್ಲಿ ನರ ಸಂತ್ರಸ್ತರಿಗೆ ಹಣ ಒಟ್ಟುಗೂಡಿಸುವ ಕಾರಣಕ್ಕೆ ಹೋಗಿದ್ದ ಸಂದರ್ಭದಲ್ಲಿ ಆರೋಗ್ಯದಲ್ಲಿ ಗಂಭೀರದ ಪ್ರಮಾಣದ ಏರುಪೇರು ಉಂಟಾಗಿ ಸಿಂಧು ಅವರು ಕೊನೆ ಉಸಿರೆಳೆಯುತ್ತಾರೆ. ಇನ್ನು ಕೆಲವು ವರ್ಷಗಳ ನಂತರ ರಘುವೀರ್ ಕೂಡ ಮರಣ ಹೊಂದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಇನ್ನು ಇವರಿಬ್ಬರೂ ದಂಪತಿಗಳಿಗೆ ಶ್ರೇಯ ಎನ್ನುವ ಹೆಣ್ಣು ಮಗಳು ಕೂಡ ಜನಿಸಿದ್ದಳು. ಮಾವ ಹಾಗೂ ಅಜ್ಜ ಅಜ್ಜಿಯ ಹಾರೈಕೆಯಲ್ಲಿ ಬೆಳೆದ ಈ ಹುಡುಗಿ ತಮಿಳು ಚಿತ್ರರಂಗದ ಯುವ ನಿರ್ದೇಶಕ ಅಶ್ವಿನ್ ಅವರನ್ನು ಮದುವೆಯಾಗುತ್ತಾರೆ ಹಾಗೂ ಒಂದು ಗಂಡು ಮಗುವಿನ ತಾಯಿ ಕೂಡ ಆಗಿದ್ದಾರೆ. ನಟ ರಘುವೀರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.