ಕನ್ನಡ ಕಿರುತರೆ ಕ್ಷೇತ್ರದಲ್ಲಿ ಪ್ರಸಾರದ ಆರಂಭದ ದಿನದಿಂದಲೇ ಇಂದಿನವರೆಗೂ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಧಾರವಾಹಿ ಎಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ. ಇದು ಎರಡು ಕಾರಣಗಳಿಗಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆರಂಭದಲ್ಲಿ ಸದ್ದು ಮಾಡಿತ್ತು.
ಮೊದಲನೇದು ಸಿನಿಮಾ ರಂಗದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅನಿರುದ್ಧ್ ಅವರು ಸಾಕಷ್ಟು ಸಮಯಗಳ ವಿರಾಮದ ನಂತರ ಮೊದಲ ಬಾರಿಗೆ ಕಿರುತೆರೆಗೆ ಕಂಬ್ಯಾಕ್ ಮಾಡಿದ ಧಾರವಾಹಿ ಇದಾಗಿತ್ತು. ಎರಡನೇದಾಗಿ ಈ ಧಾರವಾಹಿ ಎನ್ನುವುದು ಅಷ್ಟೊಂದು ದೊಡ್ಡ ಮಟ್ಟದ ಕ್ವಾಲಿಟಿ ಯನ್ನು ಕನ್ನಡ ಕಿರುತೆರೆ ಲೋಕಕ್ಕೆ ತಂದುಕೊಟ್ಟಿತ್ತು ಎನ್ನಬಹುದಾಗಿದೆ.
ಇನ್ನು ಇತ್ತೀಚಿಗಷ್ಟೇ ಅನಿರುದ್ಧ್ ಅವರು ಹೊಸ ಮನೆಯನ್ನು ಕಟ್ಟಿಸಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇನ್ನು ಈ ವೈಭವೋಪೇತ ಬಂಗಲೆಗೆ ಸಾಹಸಸಿಂಹ ವಿಷ್ಣು ನಾಮಕರಣವನ್ನು ಕೂಡ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಮನೆಯ ಬೆಲೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಹೌದು ತಮ್ಮ ಸದಭಿರುಚಿಗೆ ತಕ್ಕಂತೆ ಅನಿರುದ್ಧ ಅವರು ಕಟ್ಟಿಸಿರುವ ಈ ಬಂಗಲೆಯ ಬೆಲೆ ಭರ್ಜರಿ 5 ಕೋಟಿ ರೂಪಾಯಿಗೂ ಹೆಚ್ಚು ಎಂಬುದಾಗಿ ತಿಳಿದು ಬಂದಿದೆ. ಜೊತೆ ಜೊತೆಯಲಿ ದಾರವಾಹಿಯಿಂದ ಅನಿರುದ್ಧ್ ಅವರು ಹೊರ ಬಂದಮೇಲಿಂದ ಧಾರವಾಹಿಯ ಜನಪ್ರಿಯತೆ ಎನ್ನುವುದು ಕೊಂಚಮಟ್ಟಿಗೆ ಡೌನ್ ಆಗಿದೆ ಎಂದರು ಕೂಡ ತಪ್ಪಾಗಲಾರದು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.