ಕನ್ನಡ ಚಿತ್ರರಂಗದವರಿಗೆ ನಾಚಿಕೆ ಆಗಬೇಕು ಎಂಬುದಾಗಿ ಶಾಕಿಂಗ್ ಹೇಳಿಕೆ ನೀಡಿದ ನವರಸ ನಾಯಕ ಜಗ್ಗೇಶ್! ಯಾಕೆ ಗೊತ್ತಾ?

ನವರಸ ನಾಯಕ ಜಗ್ಗೇಶ್ ಅಂದಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ಅತ್ಯಂತ ಪ್ರತಿಭಾನ್ವಿತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಖಳನಾಯಕ ಹಾಗೂ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದ ಜಗ್ಗೇಶ್ ರವರು ನಂತರದ ವರ್ಷಗಳಲ್ಲಿ ನಾಯಕನಾಗಿ ಭಡ್ತಿ ಹೊಂದುತ್ತಾರೆ. ಸದಾಕಾಲ ಒಂದಲ್ಲ ಒಂದು ವಿಚಾರದಿಂದಾಗಿ ಸುದ್ದಿಯಲ್ಲಿರುತ್ತಾರೆ.

ಇನ್ನು ಇತ್ತೀಚಿಗಷ್ಟೇ ನವರಸ ನಾಯಕ ಜಗ್ಗೇಶ್ ನಾಯಕನಟನಾಗಿ ನಟಿಸಿರುವ ತೋತಾಪುರಿ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 30ರಂದು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇದೇ ಸಿನಿಮಾದ ಮಾಧ್ಯಮ ಸಂದರ್ಶನದಲ್ಲಿ ನವರಸ ನಾಯಕ ಜಗ್ಗೇಶ್ ಈಗ ಕನ್ನಡ ಚಿತ್ರರಂಗದವರ ವಿರುದ್ಧ ಅಸಮಾಧಾನದಿಂದ ಗುಡುಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರಂತಹ ನಟರೆ, ಹೊಸಬರ ಸಿನಿಮಾಗಳಿಗೆ ಮುಂದೆ ಬಂದು ಪ್ರಚಾರ ಮಾಡಿಕೊಳ್ಳುತ್ತಾರೆ ಆದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇಂತಹ ಪರಸ್ಪರ ಸಹಕಾರ ಭಾವನೆ ಇಲ್ಲ ಎಂಬುದಾಗಿ ಅಸಮಾಧಾನದಿಂದ ಹೇಳಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ಪ್ರತಿಯೊಬ್ಬ ದೊಡ್ಡ ಕಲಾವಿದರು ಕೂಡ ತಮ್ಮ ಸುತ್ತ ಬೇಲಿ ಹಾಕಿಕೊಂಡಿದ್ದಾರೆ ಹೊಸಬರ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತಿಲ್ಲ ಎಂಬುದಾಗಿ ಜಗ್ಗೇಶ್ ಹೇಳಿದ್ದಾರೆ. ಕೇವಲ ಇಷ್ಟಕ್ಕೆ ನಿಲ್ಲದೆ ಇತ್ತೀಚಿನ ದಿನಗಳಲ್ಲಿ ಸಿನಿಮಾ ಗಳಿಗೆ ಫೇಕ್ ಪ್ರಮೋಷನ್ ಮಾಡುವಂತಹ ಹಾಗೂ ಹೌಸ್ ಫುಲ್ ಆಗಿದೆ ಎಂದು ಸುಳ್ಳು ಹೇಳಿಕೊಂಡು ಸಿನಿಮಾ ಗೆ ನಕಲಿ ಪ್ರಚಾರವನ್ನು ಮಾಡಿಕೊಂಡು ಗೆದ್ದಿದ್ದೇವೆ ಎಂಬುದಾಗಿ ತೋರಿಸಿಕೊಳ್ಳುವವರು ಹೆಚ್ಚಾಗಿದ್ದಾರೆ ಎಂಬುದಾಗಿ ನವರಸ ನಾಯಕ ಜಗ್ಗೇಶ್ ಆರೋಪಿಸಿದ್ದಾರೆ.

ವಾಮ ಮಾರ್ಗದಲ್ಲಿ ಹೋಗಿ ನನ್ನ ಸಿನಿಮಾವನ್ನು ಗೆದ್ದಿದೆ ಅಥವಾ ಹೌಸ್ ಫುಲ್ ಆಗಿದೆ ಎಂದು ಹೇಳಿಕೊಳ್ಳುವುದಕ್ಕೆ ಕೂಡ ನನಗೆ ಗೊತ್ತಿದೆ ಆದರೆ ಅಂತಹ ನೀಚ ಕೆಲಸವನ್ನು ನಾನು ಮಾಡಲು ಹೋಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಇತ್ತೀಚಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಿನಿಮಾವನ್ನು ಗೆದ್ದಿದೆ ಎಂಬುದಾಗಿ ತೋರಿಸಿಕೊಳ್ಳಲು ಹಲವಾರು ನಕಲಿ ಆಟಗಳನ್ನು ಮಾಡುತ್ತಿದ್ದಾರೆ ಎಂಬುದಾಗಿ ನವರಸ ನಾಯಕ ಜಗ್ಗೇಶ್ ಆರೋಪಿಸಿದ್ದಾರೆ. ಆದರೆ ಜಗ್ಗೇಶ್ ಇಲ್ಲಿ ಯಾವ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ.

Leave a Comment

error: Content is protected !!