ವಸಿಷ್ಠ ಸಿಂಹನ ಮದುವೆಯಾಗೋಕು ಮುಂಚೆ ಐದು ವರ್ಷ ಪ್ರೀತಿಸಿ ಬ್ರೇಕ್ ಅಪ್ ಆಗಿ ಡಿಪ್ರೆಶನ್ ಗೆ ಹೋಗಿದ್ರಂತೆ ನಟಿ ಹರಿಪ್ರಿಯಾ.

Hariprriya ಶ್ರುತಿ ಚಂದ್ರ ಸೇನಾ ಆಗಿದ್ದ ಚಿಕ್ಕಮಗಳೂರಿನ ಹುಡುಗಿ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಹರಿಪ್ರಿಯ ಆಗಿ ಬದಲಾಗಿದ್ದು ಈಗ ಇತಿಹಾಸವೇ ಸರಿ. ಮೊದಲಿಗೆ ತುಳು ಸಿನಿಮಾ ಒಂದರಲ್ಲಿ ನಟಿಯಾಗಿ ಕಾಣಿಸಿಕೊಂಡು ನಂತರ ಕನ್ನಡದಲ್ಲಿ ಕಾಲಿಟ್ಟು ತಮಿಳು ಹಾಗೂ ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗಗಳಲ್ಲಿ ಕೂಡ ಸೂಪರ್ ಹಿಟ್(Super Hit) ಸಿನಿಮಾಗಳಲ್ಲಿ ಕಾಣಿಸಿಕೊಂಡು ದಕ್ಷಿಣ ಭಾರತ ಚಿತ್ರರಂಗದ ಭರವಸೆಯ ನಾಯಕ ನಟಿಯಾಗಿ ಕೂಡ ಕಾಣಿಸಿಕೊಂಡವರು ನಮ್ಮೆಲ್ಲರ ನೆಚ್ಚಿನ ಹರಿಪ್ರಿಯ.

ರಾಕಿಂಗ್ ಸ್ಟಾರ್ ಯಶ್ ಅವರ ಕಳ್ಳರ ಸಂತೆ ಸಿನಿಮಾದಲ್ಲಿ ಕೂಡ ಹರಿಪ್ರಿಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಗದಿದ್ದ ಕಾರಣ ಪರಭಾಷೆಗೆ ಅವಕಾಶಕ್ಕಾಗಿ ಹೋಗುತ್ತಾರೆ. ಆದರೆ ನಿಜವಾಗಿಯೂ ಹರಿಪ್ರಿಯ ಅವರಿಗೆ ದೊಡ್ಡ ಬ್ರೇಕ್ ಥ್ರೂ(Break Through) ನೀಡಿದಂತಹ ಸಿನಿಮಾ ಎಂದರೆ ಅದು 2014ರಲ್ಲಿ ಬಿಡುಗಡೆಯಾದ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ನಾಯಕತ್ವದಲ್ಲಿ ಮೂಡಿ ಬಂದ ಉಗ್ರಂ ಸಿನಿಮಾ. ಇದಾದ ನಂತರ ಒಂದಾದ ಮೇಲೊಂದರಂತೆ ಕನ್ನಡದಲ್ಲಿ ದರ್ಶನ್ ಸುದೀಪ್ ಹೀಗೆ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

haripriya and vasishta simha

ಇನ್ನು ಒಮ್ಮೆ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿರುವಂತೆ ಐದು ವರ್ಷಗಳ ಪ್ರೀತಿಯಲ್ಲಿ ಮೋಸ ಹೋಗಿ ಅದರಿಂದ ಹೊರಬರಲು ಸಂಪೂರ್ಣವಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದರಂತೆ. ಎಷ್ಟರಮಟ್ಟಿಗೆ ಎಂದರೆ ಒಂದೇ ವರ್ಷದಲ್ಲಿ 17 ಸಿನಿಮಾಗಳಲ್ಲಿ ಹರಿಪ್ರಿಯಾ ಅವರು ಕಾಣಿಸಿಕೊಳ್ಳುತ್ತಾರೆ. ಇದೇ ಸಮಯದಲ್ಲಿ ಅಂದರೆ 2016ರಲ್ಲಿ ವಸಿಷ್ಠ ಸಿಂಹ ಅವರ ಪರಿಚಯವಾಗಿ ಲಾಕ್ಡೌನ್ ಸಂದರ್ಭದಲ್ಲಿ ಇವರಿಬ್ಬರ ಪರಿಚಯ ಎನ್ನುವುದು ಪ್ರೀತಿಗೆ ತಿರುಗುತ್ತದೆ. ಪ್ರೀತಿಯಿಂದ ನೊಂದಿದ್ದರು ಕೂಡ ಅದರಿಂದ ಹೊರಬರಲು ಹರಿಪ್ರಿಯಾ ಅವರು ತೆಗೆದುಕೊಂಡ ನಿರ್ಧಾರ ನಿಜಕ್ಕೂ ಕೂಡ ಪ್ರಶಂಸಾರ್ಹವಾದದ್ದು.

ಕಳೆದ ಡಿಸೆಂಬರ್ ನಲ್ಲಿ ಇವರಿಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡು ಈ ವರ್ಷದ ಮೊದಲ ತಿಂಗಳಿನಲ್ಲಿಯೇ ಮದುವೆ ಆಗುವ ಮೂಲಕ ದಾಂಪತ್ಯ(Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೂ ಕೂಡ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳದೆ ಮತ್ತೆ ಜೀವನದಲ್ಲಿ ಕಮ್ ಬ್ಯಾಕ್ ಮಾಡಬಹುದೆಂಬುದನ್ನು ಹರಿಪ್ರಿಯಾ ಅವರು ತಮ್ಮ ಜೀವನದ ಉದಾಹರಣೆ ನೀಡುವಂತೆ ಬದುಕಿ ತೋರಿಸಿದ್ದಾರೆ ಇದು ನಿಜಕ್ಕೂ ಕೂಡ ಎಲ್ಲರೂ ಮೆಚ್ಚಬೇಕಾದದ್ದು ಇದನ್ನೇ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವುದು.

Leave a Comment

error: Content is protected !!