ಹರೀಶ್ ರೈ ಅವರಿಗೆ ಕಷ್ಟದ ಸಮಯದಲ್ಲಿ ಹಣ ಸಹಾಯ ಮಾಡಿದ ಡಿ ಬಾಸ್ ಪತ್ರದಲ್ಲಿ ಬರೆದಿದ್ದೇನು ಗೊತ್ತಾ? ನೀವು ಕೂಡ ಕಣ್ಣೀರು ಹಾಕುವ ಸಾಲುಗಳಿವು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಅವರ ನಿಜ ಜೀವನದ ಕೆಲವೊಂದು ತತ್ವಗಳ ವಿಚಾರಕ್ಕಾಗಿ ಕೂಡ ಜನಪ್ರಿಯರಾದವರು. ನೋಡಲು ಹೊರಟನಂತೆ ಕಂಡರೂ ಕೂಡ ಡಿ ಬಾಸ್ ರವರ ಮನಸ್ಸು ಎನ್ನುವುದು ಅತ್ಯಂತ ವಾತ್ಸಲ್ಯ ಭರಿತವಾದದ್ದು ಎಂದರೆ ತಪ್ಪಾಗಲಾರದು.

ಹೌದು ಯಾರೇ ಕೂಡ ಕಷ್ಟ ಎಂದು ಬಂದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಮುಂದೆ ನೋಡದೆ ಅವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಎಲ್ಲಿಯೂ ಕೂಡ ಇದರ ಬಗ್ಗೆ ಹೇಳಿಕೊಳ್ಳದೆ ಪ್ರಚಾರಕ್ಕಾಗಿ ಇದನ್ನು ಬಳಸಿಕೊಳ್ಳುವುದಿಲ್ಲ. ನಿಜಕ್ಕೂ ಕೂಡ ಇಂತಹ ಸ್ವಾರ್ಥದ ದುನಿಯಾದಲ್ಲಿ ನಿಸ್ವಾರ್ಥ ಜೀವನವನ್ನು ಸಾಗಿಸುವ ಡಿ ಬಾಸ್ ರವರ ವ್ಯಕ್ತಿತ್ವ ಮೇರು ವ್ಯಕ್ತಿತ್ವ.

ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹರೀಶ್ ರೈ ರವರು ಗಂಟಲಿನ ಕ್ಯಾನ್ಸರ್ ಕಾಯಿಲೆಯಿಂದಾಗಿ ಸಾಕಷ್ಟು ಕಷ್ಟ ಪಡಬೇಕಾಗಿ ಬಂದಿತು. ಈ ಸಂದರ್ಭದಲ್ಲಿ ನಮ್ಮ ಕನ್ನಡ ಚಿತ್ರರಂಗದ ಹಲವಾರು ಜನರು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ ಅವರಲ್ಲಿ ಡಿ ಬಾಸ್ ಕೂಡ ಒಬ್ಬರು. ಆದರೆ ಡಿ ಬಾಸ್ ಕೇವಲ ಹಣವನ್ನು ಮಾತ್ರವಲ್ಲದೆ ಹರೀಶ್ ರೈ ಅವರಿಗೆ ಒಂದು ಭರವಸೆಯನ್ನು ಕೂಡ ನೀಡಿದ್ದಾರೆ.

ತಮ್ಮ ಆಪ್ತರಿಗೆ ಹಣದ ಜೊತೆಗೆ ಒಂದು ಕಾಗದವನ್ನು ಕೂಡ ಹರೀಶ್ ರೈ ಅವರಿಗಾಗಿ ಡಿ ಬಾಸ್ ಕಳಿಸಿದ್ದಾರೆ. ಅದರಲ್ಲಿ ಗುರುಗಳೇ ನೀವು ಹುಷಾರಾಗಬೇಕು, ನೀವು ನಮ್ಮ ಸಿನಿಮಾದಲ್ಲಿ ನಟಿಸಬೇಕು ಅದಕ್ಕಾಗಿ ನೀವು ಮತ್ತೆ ಎದ್ದು ನಿಲ್ಲಬೇಕು ಎಂಬುದಾಗಿ ಬರೆದಿದ್ದಾರೆ. ಈ ಸಾಲುಗಳು ಈಗ ಅಭಿಮಾನಿಗಳ ಕಣ್ಣಲ್ಲಿ ಹೆಮ್ಮೆಯ ಕಣ್ಣೀರು ಬರುವಂತೆ ಮಾಡುತ್ತಿದೆ.

Leave a Comment

error: Content is protected !!