ಯಾರಿಗೂ ಗೊತ್ತಿಲ್ಲದೆ ಡಿ ಬಾಸ್ ಮಾಡಿರೋ ಸಹಾಯದ ಕೆಲಸವನ್ನು ಬಿಚ್ಚಿಟ್ಟ ನೆನಪಿರಲಿ ಪ್ರೇಮ್ ಅದೇನು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ಪರದೆ ಹಿಂದೆ ಕೂಡ ಅವರು ಹೀರೋ ಅಂತೆ ನಿಜ ಜೀವನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಡಿ ಬಾಸ್ ಎಂಬುದಾಗಿ ಕರೆಯುತ್ತಾರೆ. ಡಿ ಬಾಸ್ (D boss) ಅವರ ಬಗ್ಗೆ ಅವರು ಸಹಾಯ ಮಾಡಿರುವ ಬಗ್ಗೆ ಯಾರಿಗೂ ತಿಳಿಯದ ಹಲವಾರು ಕಥೆಗಳಿವೆ.

ಕಲಿಯುಗದ ಕರ್ಣನಂತೆ ಕಾಣುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಡಗೈಯಿಂದ ಮಾಡಿದ ಸಹಾಯ ಬಲಗೈಗೂ ಕೂಡ ತಿಳಿಯದಂತೆ ಜೋಪಾನ ವಹಿಸುತ್ತಾರೆ. ಅಷ್ಟರಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೇರೆಯವರಿಗೆ ಮಾಡಿದ ಸಹಾಯವನ್ನು ಎಲ್ಲೂ ಕೂಡ ಪ್ರದರ್ಶನ ಮಾಡುವುದಕ್ಕೆ ಹೋಗುವುದಿಲ್ಲ. ಇನ್ನು ಇತ್ತೀಚಿಗಷ್ಟೇ ಹುಬ್ಬಳ್ಳಿಯಲ್ಲಿ ನಡೆದಿರುವ ಬನಾರಸ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನೆನಪಿರಲಿ ಪ್ರೇಮ್ ರವರು ಡಿ ಬಾಸ್ ಅವರು ಮಾಡಿರುವ ಒಂದು ಸಹಾಯವನ್ನು ನೆನೆದು ಯಾರಿಗೂ ತಿಳಿಯದ ಒಂದು ವಿಚಾರವನ್ನು ಬಿಚ್ಚಿಟ್ಟರು.

ಹೌದು ಮಿತ್ರರೇ ನೆನಪಿರಲಿ ಪ್ರೇಮ್ ರವರು ಜೊತೆ ಜೊತೆಯಲಿ ಚಿತ್ರೀಕರಣದ ಆರಂಭಕ್ಕೂ ಮುನ್ನವೇ ಚಿತ್ರತಂಡ ಮಾಧ್ಯಮ ಸುದ್ದಿಗೋಷ್ಠಿಯನ್ನು ಇಟ್ಟಿತ್ತು. ಈ ಸಂದರ್ಭದಲ್ಲಿ ನೆನಪಿರಲಿ ಪ್ರೇಮ್ ರವರು ಕಾರಿನಿಂದ ಬರಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದರು ಹೀಗಾಗಿ ಅವರ ಬಳಿ ಕಾರ್ ಇಲ್ಲದಿದ್ದ ಸಂದರ್ಭದಲ್ಲಿ ಅವರ ಸ್ನೇಹಿತನ ಬಳಿ ಕೇಳಿದ್ದರು. ಆಗ ಸಿನಿಮಾದ ಪ್ರೊಡಕ್ಷನ್ ಮ್ಯಾನೇಜರ್ ಫೋನ್ ಮಾಡಿ ಅದಾಗಲೇ ಕಾರ್ ನಿಮ್ಮ ಮನೆ ಮುಂದೆ ಬಂದು ನಿಂತಿದೆ ಬೇಗ ಹೊರಡಿ ಎಂಬುದಾಗಿ ಹೇಳುತ್ತಾರೆ.

ಹೊರಗೆ ಬಂದು ನೋಡಿದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸ್ವತಹ ತಮ್ಮ ಸ್ವಂತ ಕಾರನ್ನು ಪ್ರೇಮ್ ಅವರಿಗಾಗಿ ಕಳುಹಿಸಿಕೊಟ್ಟಿದ್ದರು ಎಂಬುದಾಗಿ ತಿಳಿದು ಬರುತ್ತದೆ. ಅಂದಿನಿಂದ ಪ್ರೇಮ್ ಅವರು ಡಿ ಬಾಸ್ ಅವರನ್ನು ಭಾಯಿಜಾನ್ ಎಂಬುದಾಗಿ ಕರೆಯಲು ಪ್ರಾರಂಭಿಸುತ್ತಾರೆ. ಒಮ್ಮೆ ಯಾರನ್ನಾದರೂ ಇಷ್ಟಪಟ್ಟರು ಡಿ ಬಾಸ್ ಅವರಿಗಾಗಿ ಯಾವ ಸಹಾಯವನ್ನು ಕೂಡ ಮಾಡಲು ಸಿದ್ದರಾಗಿರುತ್ತಾರೆ ಎಂಬುದನ್ನು ಈ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!