ತೂಗುದೀಪ್ ಶ್ರೀನಿವಾಸ್ ಅವರು ತಮ್ಮ ಮಗ ದರ್ಶನ್ ಅವರಿಗೆ ಬಿಟ್ಟು ಹೋದ ಕೊನೆಯ ಉಡುಗೊರೆ ಯಾವುದು ಗೊತ್ತಾ?

The last gift that Thoogudeep Srinivas left to his son Darshan: ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ರವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ತೂಗುದೀಪ್ ಶ್ರೀನಿವಾಸ್ ರವರು ಕನ್ನಡ ಚಿತ್ರರಂಗದ ಪೂಜ್ಯ ಮಾನ್ಯ (Respected) ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ.

ಹೀಗಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತೂಗುದೀಪ್ ಶ್ರೀನಿವಾಸ್ (Thoogudeep Srinivas) ಅವರ ಮರಣಾ ನಂತರ ಯಾರೂ ಕೂಡ ಕರೆದು ಅವಕಾಶ ನೀಡಲಿಲ್ಲ. ಸ್ವತಹ ಡಿ ಬಾಸ್ ಅವರೇ ಪ್ರಾರಂಭದಿಂದ ಲೈಟ್ ಬಾಯ್ ಆಗಿ ಕೆಲಸವನ್ನು ಪ್ರಾರಂಭಿಸಿ ನಂತರ ಈಗ ಕೋಟಿ ಕೋಟಿ ಸಂಭಾವನೆ(Remuneration) ಪಡೆಯುವಂತಹ ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರತಿಭೆ ಹಾಗೂ ಡೆಡಿಕೇಶನ್ ಗೆ (Dedication) ಇರುವಂತಹ ಒಂದು ಒಳ್ಳೆಯ ಉದಾಹರಣೆ ಹಾಗೂ ಯುವ ಕಲಾವಿದರಿಗೆ ಸ್ಪೂರ್ತಿಯ ಕಥೆ (Inspiring Story) ಎಂದು ಹೇಳಬಹುದಾಗಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅವರ ತಂದೆ ತೂಗುದೀಪ ಶ್ರೀನಿವಾಸ್ ರವರು ಬಿಟ್ಟು ಹೋದಂತಹ ಕೊನೆಯ ಉಡುಗೊರೆ(Gift) ಯಾವುದು ಎನ್ನುವ ವಿಚಾರದ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ಕೆಲವೊಂದು ವಿಡಿಯೋಗಳನ್ನು ನೋಡಿ ಕುತೂಹಲ ಭರಿತರಾಗಿದ್ದಾರೆ(Curious). ಹಾಗಿದ್ದರೆ ಬನ್ನಿ ತಮ್ಮ ಮಗನಿಗೆ ತೂಗುದೀಪ್ ಶ್ರೀನಿವಾಸ್ ಅವರು ಬಿಟ್ಟು ಹೋದಂತಹ ಕೊನೆಯ ಉಡುಗೊರೆ ಏನೆಂಬುದನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿವಿಶ್ವದ ಅತ್ಯಂತ ದುಬಾರಿ ಬೆಲೆಯ ಕಾರನ್ನು ಖರೀದಿಸಿದ ಅಂಬಾನಿ ಕಾರಿನ ಬೆಲೆ ಕೇಳಿದ್ರೆ ನೀವು ಕೂಡ ಬೆಚ್ಚಿಬಿಳ್ತೀರಾ.

ಕ್ರಾಂತಿ ಸಿನಿಮಾದ ಪ್ರಚಾರದ ನಿಮಿತ್ತವಾಗಿ ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದ ದರ್ಶನ್ ಅವರಿಗೆ ಇದೇ ಪ್ರಶ್ನೆ ಕೇಳಿ ಬಂದಾಗ ಅವರು ನಮ್ಮ ತಂದೆ ನನಗೆ ಕೊನೆಯದಾಗಿ ಬಿಟ್ಟು ಹೋಗಿರುವ ಉಡುಗೊರೆ ಲೂನ(Luna) ಎಂಬುದಾಗಿ. ಹಳೆಯ ದ್ವಿಚಕ್ರ ವಾಹನ ಲೂನ ಆಗಿದ್ದರೂ ಕೂಡ ಇಂದು ಅವರು ಖರೀದಿಸಿರುವ ಕೋಟಿ ಕೋಟಿ ಬೆಲೆಯ ಲ್ಯಾಂಬೋರ್ಗಿನಿಗಿಂತ(Lamborghini) ಅತ್ಯಂತ ಮೌಲ್ಯವಾದುದು ಎಂದರೆ ತಪ್ಪಾಗಲಾರದು. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!