Kranti ಕ್ರಾಂತಿ ಸಿನಿಮಾಗಾಗಿ ಬೈಕ್ ಹಿಡಿದು ಊರೂರು ಸುತ್ತಿ ಪ್ರಚಾರ ಮಾಡಿದ ಅಭಿಮಾನಿ ಕೆಲಸ ಕಳ್ಕೊಂಡ ಬಗ್ಗೆ ಡಿ ಬಾಸ್ ಹೇಳಿದ್ದೇನು ಗೊತ್ತಾ?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಎಂಬುದಾಗಿ ಚಿತ್ರತಂಡ ಖಾಸಗಿ ಹೋಟೆಲ್ ನಲ್ಲಿ ಚಿತ್ರದ ಸಕ್ಸಸ್ ಮೀಟ್(Success Meet) ಅನ್ನು ಹಮ್ಮಿಕೊಂಡಿತ್ತು ಹಾಗೂ ಎಲ್ಲೇ ಚಿತ್ರತಂಡ ಕೇಕ್ ಅನ್ನು ಹಂಚಿ ಸಂಭ್ರಮಾಚರಣೆಯನ್ನು ಕೂಡ ಮಾಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಚಿತ್ರದ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕೂಡ ಕಲೆಕ್ಷನ್ ನಲ್ಲಿ ಮಾತ್ರ ಚಿತ್ರ ಹಿಂದೆ ಬಿದ್ದಿಲ್ಲ ಎಂಬುದಾಗಿ ಈ ಮೂಲಕ ಹೇಳಬಹುದಾಗಿದೆ.

ಇನ್ನು ನಿಮಗೆಲ್ಲ ನೆನಪಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿರುವ ಅವಿನಾಶ್ ನಾಗರಾಜ್ ಎನ್ನುವವರು ತಮ್ಮ ಬುಲೆಟ್ ಬೈಕ್ಗೆ ಕ್ರಾಂತಿ ಸಿನಿಮಾದ ಪೋಸ್ಟರ್(Poster) ಅನ್ನು ಅಂಟಿಸಿಕೊಂಡು ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನು ಸುತ್ತಿ ಉಪೇಂದ್ರ ಅಭಿಷೇಕ್ ಅವರಂತಹ ಸ್ಟಾರ್ ನಟರನ್ನು ಕೂಡ ಭೇಟಿ ಮಾಡಿ ಕ್ರಾಂತಿ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರವನ್ನು ನೀಡಿದ್ದರು ಎಂದರೆ ತಪ್ಪಾಗಲಾರದು. ಇದಕ್ಕಾಗಿ ಅವಿನಾಶ್ ನಾಗರಾಜ್ ಅವರು ಭರ್ಜರಿಯಾಗಿ ಎರಡು ತಿಂಗಳು ಸಮಯವನ್ನು ವಿನಯೋಗಿಸಿದ್ದರು.

Dboss Fan’s Kranti promotion with his Bike

ಆದರೆ ಎರಡು ತಿಂಗಳು ಕೆಲಸಕ್ಕೆ ಬರೆದಿದ್ದ ಕಾರಣ ಅವರ ಕಂಪನಿ ಅವರಿಗೆ ತಿಳಿಸದೆ ಈಗ ಅವರನ್ನು ಕೆಲಸದಿಂದ ಟರ್ಮಿನೆಟ್ ಅಂದರೆ ಕೆಲಸದಿಂದ ತೆಗೆದು ಹಾಕಲಾಗಿದೆ. ಇದನ್ನು ಇತ್ತೀಚಿಗೆ ವಿಡಿಯೋ(Video) ಮುಖಾಂತರ ಅವಿನಾಶ್, ನಾಗರಾಜ್ ಅವರು ಮಾತನಾಡುತ್ತಾ ಡಿ ಬಾಸ್ ನನಗೆ ಬೇಡ ಎನ್ನುವುದಾಗಿ ಹೇಳಿದರು ಕೂಡ ನಾನು ಅವರ ಮಾತನ್ನು ಕೇಳಿದೆ ಪ್ರಚಾರಕ್ಕಾಗಿ ಎರಡು ತಿಂಗಳು ಕೆಲಸಕ್ಕೆ ಹೋಗದೆ ಉಳಿದುಕೊಂಡಿದ್ದೆ ಹೀಗಾಗಿ ಕಂಪನಿಯವರು ನನಗೆ ಹೇಳದೆ ಈ ರೀತಿ ಮಾಡಿದ್ದಾರೆ ನನ್ನ ವಯಕ್ತಿಕ ಜೀವನ ಈಗ ಹಾಳಾಗಿದೆ ಎಂಬುದಾಗಿ ಅಲವತ್ತುಕೊಂಡಿದ್ದರು. ಇನ್ನು ಕ್ರಾಂತಿ ಸಿನಿಮಾದ ಸಕ್ಸಸ್ ಮೀಟ್ ಗೆ ಅವಿನಾಶ್ ನಾಗರಾಜ್ ಅವರು ಕೂಡ ಬಂದಿದ್ದರು.

ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅವಿನಾಶ್ ನಾಗರಾಜ ಅವರನ್ನು ನೋಡಿ ಏನಪ್ಪ ಕೆಲಸ ಕಳ್ಕೊಂಡ ಎನ್ನುವುದಾಗಿ ಹೇಳಿ ನಸುನಕ್ಕು(Smiled) ಮುಂದೆ ಹೋಗಿದ್ದರಂತೆ. ಅಭಿಮಾನ ಇರಬೇಕು ಆದರೆ ಅದು ನಮ್ಮ ಜೀವನವನ್ನೇ ಮುಳುಗಿಸುವಂತೆ ಆಗಬಾರದು ಬದಲಾಗಿ ಅವರಿಂದ ಒಳ್ಳೆಯ ವಿಷಯಗಳನ್ನು ಕಲಿತು ಅದರಿಂದ ಜೀವನದಲ್ಲಿ ಏನಾದರೂ ದೊಡ್ಡದ್ದನ್ನು ಸಾಧಿಸುವಂತೆ ಆಗಬೇಕು ಎಂಬುದನ್ನು ಈ ಮೂಲಕ ನಾವು ಬದುಕಿನ ಪಾಠದಂತೆ ತಿಳಿದುಕೊಳ್ಳಬೇಕಾಗಿದೆ.

Leave a Comment

error: Content is protected !!