Dboss: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳಕೊಂಡಿದ್ದ ಡಿ ಬಾಸ್ ಫ್ಯಾನ್ ಈಗ ಮತ್ತೆ ಕಾಟೇರ ಸಿನಿಮಾಗಾಗಿ ಏನ್ ಮಾಡ್ತಿದ್ದಾನೆ ಗೊತ್ತಾ?

Dboss Fan ಅಭಿಮಾನದ ಹುಚ್ಚು ಎನ್ನುವುದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಅಭಿಮಾನಿಗಳಿಂದ ನಾವು ನೋಡಿ ಕಲಿಯಬೇಕು. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಕೂಡ ಮಾಡುವಂತಹ ಅಭಿಮಾನ ಎನ್ನುವುದು ಅವರ ಎದೆಯಾಳದಲ್ಲಿದೆ. ಅದಕ್ಕಾಗಿಯೇ ಡಿ ಬಾಸ್(Dboss) ತಮ್ಮ ಅಭಿಮಾನಿಗಳನ್ನು ತನ್ನ ಸೆಲೆಬ್ರಿಟಿಸ್ ಗಳು ಎನ್ನುವುದಾಗಿ ಕರೆಯುತ್ತಾರೆ.

ಇದನ್ನು ಈಗಾಗಲೇ ಅಭಿಮಾನಿಗಳು ಹಾಗೂ ದರ್ಶನ್(Darshan) ಇಬ್ಬರೂ ಕೂಡ ಸಾಕಷ್ಟು ಬಾರಿ ಸಾಬೀತುಪಡಿಸಿದ್ದು ಇಬ್ಬರೂ ಕೂಡ ಪರಸ್ಪರ ಕುಟುಂಬಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ದರ್ಶನ್ ರವರ ಸಾಕಷ್ಟು ಕಷ್ಟ ಕಾಲದಲ್ಲಿ ಅಭಿಮಾನಿಗಳೇ ಅವರ ಕುಟುಂಬದಂತೆ ಬೆಂಗಾವಲಾಗಿ ನಿಂತಿದ್ದನ್ನು ಕೂಡ ನಾವು ಇಲ್ಲಿ ಸ್ಮರಿಸಬಹುದು.

ಕಳೆದ ಸಿನಿಮಾ ಆಗಿರುವ ಕ್ರಾಂತಿ(Kranti) ಸಿನಿಮಾದಲ್ಲಿ ಕೂಡ ಮೀಡಿಯಾದವರು ಪ್ರಚಾರ ನೀಡದೆ ಇದ್ದಾಗ ಅಭಿಮಾನಿಗಳೇ ಮುಂದೆ ನಿಂತು ಪ್ರಚಾರ ಮಾಡಿದ್ದರು. ಸಂದರ್ಭದಲ್ಲಿ ಅವಿನಾಶ್ ಎನ್ನುವಂತಹ ಒಬ್ಬ ದರ್ಶನ್ ಅಭಿಮಾನಿ ಕೂಡ ರಾಜ್ಯದ ಪ್ರತಿಯೊಂದು ಮೂಲೆ ಮೂಲೆಯನ್ನು ತಿರುಗಿ ಕ್ರಾಂತಿ ಸಿನಿಮಾದ ಪ್ರಚಾರ ಮಾಡಿ ಕೆಲಸವನ್ನು ಕಳೆದುಕೊಂಡಿದ್ದನ್ನು ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹೀಗಿದ್ದರೂ ಕೂಡ ಈಗಲೂ ಛಲ ಬಿಡದೆ ದರ್ಶನ್(Darshan) ರವರ ಮುಂದಿನ ಸಿನಿಮಾ ಆಗಿರುವಂತಹ ಕಾಟೇರ(Kaatera) ಸಿನಿಮಾವನ್ನು ವಿದೇಶದಲ್ಲಿ ಪ್ರಚಾರ ಮಾಡುತ್ತೇನೆ ಎಂಬುದಾಗಿ ಹೇಳಿ ಬೈಕ್ ಹತ್ತಿ ವಿದೇಶಕ್ಕೆ ಹೊರಟು ಮೊದಲ ದೇಶವಾಗಿ ಭೂತಾನ್ ದೇಶದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವಿನಾಶ್ ಅವರಿಗೆ ಶುಭವಾಗಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!