ಮಗನ ಹೋಂ ವರ್ಕ್ ಮಾಡೋಕೆ ನನ್ನ ಹೆಂಡತಿ ಕಷ್ಟ ಪಡುತ್ತಾಳೆ ಅಂತ ಪತ್ನಿ ವಿಜಯಲಕ್ಷ್ಮಿ ಮೇಲೆ ಶಾಕಿಂಗ್ ಹೇಳಿಕೆ ನೀಡಿದ ಡಿಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗ ಸದ್ಯದ ಮಟ್ಟಿಗೆ ಕಾಣುತ್ತಿರುವ ಅತ್ಯಂತ ದೊಡ್ಡ ಸ್ಟಾರ್ ಅನ್ನಬಹುದಾಗಿದೆ. ಜಾಗತಿಕವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೊಡ್ಡಮಟ್ಟದ ಹೆಸರನ್ನು ಹೊಂದದೇ ಇರಬಹುದು ಆದರೆ ಕರ್ನಾಟಕ ರಾಜ್ಯದಲ್ಲಿ ಅವರಷ್ಟು ಮಾಸ್ ಅಭಿಮಾನಿಗಳನ್ನು ಹೊಂದಿರುವ ಮತ್ತೊಬ್ಬ ಕನ್ನಡ ಸ್ಟಾರ್ ಸಿಗಲು ಸಾಧ್ಯವೇ ಇಲ್ಲ ಎಂದು ಯಾವುದೇ ಅನುಮಾನ ಇಲ್ಲದೆ ಹೇಳಬಹುದಾಗಿದೆ.

ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಪಂಚಭಾಷ ಪ್ಯಾನ್ ಇಂಡಿಯನ್ ಸಿನಿಮಾ ಆಗಿರುವ ಕ್ರಾಂತಿ ಇದೇ 2023ರ ಜನವರಿ 26ರ ಗಣರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಕುರಿತಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ ಎನ್ನಬಹುದಾಗಿದೆ.

ಶೈಕ್ಷಣಿಕ ವಿಚಾರಗಳ ಕುರಿತಂತೆ ಈ ಸಿನಿಮಾದಲ್ಲಿ ಡಿ ಬಾಸ್ ರವರು ವಿದೇಶಿ ಕನ್ನಡಿಗನಾಗಿ ಹೇಳುವ ಪ್ರಯತ್ನವನ್ನು ಮಾಡಲಿದ್ದಾರೆ ಎಂಬುದಾಗಿ ಸಿನಿಮಾ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಇದೇ ಸಂದರ್ಭದಲ್ಲಿ ತಮ್ಮ ಮಗನ ಶಿಕ್ಷಣದ ಕುರಿತಂತೆ ಒಂದು ಆಶ್ಚರ್ಯಕರ ವಿಚಾರವೊಂದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹಿರಂಗಪಡಿಸಿದ್ದಾರೆ. ಹಾಗಿದ್ದರೆ ಅದೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕ್ರಾಂತಿ ಸಿನಿಮಾದ ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ತಮ್ಮ ಮಗನ ಸಿಲಬಸ್ ಕುರಿತಂತೆ ಮಾತನಾಡುತ್ತಾ ಇತ್ತೀಚಿಗಷ್ಟೇ ಅದ್ಯಾವುದೋ ಪ್ರಶ್ನೆಗೆ ಉತ್ತರ ತಿಳಿಯಲಿಲ್ಲ ಎಂಬ ಕಾರಣಕ್ಕಾಗಿ ಗೂಗಲ್ ನಲ್ಲಿ ಹುಡುಕುವಷ್ಟರ ಮಟ್ಟಿಗೆ ಕಷ್ಟ ಪಡಬೇಕಾಗಿದೆ ಎಂಬುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದಿನ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಮಾತನಾಡಿದ್ದಾರೆ. ಡಿ ಬಾಸ್ ಅವರು ಹೇಳುವಂತೆ ಇಂದಿನ ಕಾಲದ ಶಿಕ್ಷಣ ವ್ಯವಸ್ಥೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!