ಡಿ ಬಾಸ್ ಅಭಿಮಾನಿ ಮೇಲೆ ಕರುಣೆ ಇಲ್ಲದೆ ಎಳೆದಾಡಿದ ಬಾಡಿಗಾರ್ಡ್. ಈ ಜಾಗದಲ್ಲಿ ಅಪ್ಪು ಇದ್ದಿದ್ದರೆ.. ಎಂದ ಅಭಿಮಾನಿಗಳು ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಸಾಲಿನ ನಟರಾಗಿ ಕಾಣಿಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂಬುದಾಗಿ ಪ್ರೀತಿಯಿಂದ ಕರೆಯುತ್ತಾರೆ.

ತಮ್ಮ ಮನೆಗೆ ಸಹಾಯ ಕೇಳಿಕೊಂಡು ಬರುವಂತಹ ಅಭಿಮಾನಿಗಳು ಹಾಗೂ ಹಿರಿಯರಿಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಿಂದುಮುಂದೆ ನೋಡದೆ ತಮ್ಮ ಕೈಲಾದಷ್ಟು ಸಹಾಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡಿಬಿಡುತ್ತಾರೆ ಅದಕ್ಕಾಗಿಯೇ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಅವರು ಕಲಿಯುಗದ ದೇವರಾಗಿದ್ದಾರೆ ಎಂದರು ತಪ್ಪಾಗಲಾರದು. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಕೂಡ ಅವರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಸಾಗರದ ರೀತಿಯಲ್ಲಿ ಸೇರುತ್ತಾರೆ.

ಇನ್ನು ಇತ್ತೀಚಿಗೆ ಎಷ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾವುದೋ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದ ಸಂದರ್ಭದಲ್ಲಿ ಕೂಡ ಸಹಸ್ರಾರು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವೇದಿಕೆ ಮೇಲೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಒಬ್ಬ ಅಭಿಮಾನಿ ಓಡಿ ಬಂದು ಅವರನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಾನೆ. ಆಗ ಬಾಡಿಗಾರ್ಡ್ ಅಭಿಮಾನಿಗೆ ಮಾಡಿದ ಕಾರ್ಯ ನಿಜಕ್ಕೂ ಕೂಡ ಎಲ್ಲರ ಮನಸ್ಸಿನಲ್ಲಿ ಬೇಸರವನ್ನು ತರಿಸಿದೆ.

ಹೌದು ಮಿತ್ರರೇ ಡಿ ಬಾಸ್ ಅವರನ್ನು ತಬ್ಬಿಕೊಳ್ಳಲು ಬಂದ ಅವರ ಅಭಿಮಾನಿಯನ್ನು ಅಲ್ಲೇ ಇದ್ದ ಬಾಡಿಗಾರ್ಡ್ ಎಳೆದುಕೊಂಡು ವೇದಿಕೆಯ ಆಚೆ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ ಇನ್ನು ಈ ವಿಡಿಯೋ ಕೂಡ ವೈರಲ್ ಆಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!