Vishnu Smaraka ವಿಷ್ಣು ಸ್ಮಾರಕದ ಬಗ್ಗೆ ಡಿ ಬಾಸ್ ನೀಡಿದ ಹೇಳಿಕೆಯೇನು ಗೊತ್ತಾ? ವಿಡಿಯೋ ವೈರಲ್.

Dboss ಕನ್ನಡ ಚಿತ್ರರಂಗದಲ್ಲಿ ಕೆಲವು ನಟರು ಕೇವಲ ನಟರಾಗಿ ಉಳಿಯದೆ ಅವರ ಅಭಿಮಾನಿಗಳಿಗೆ ನೆಚ್ಚಿನ ಆರಾಧ್ಯ ದೈವವೂ(Demigod) ಕೂಡ ಆಗಿದ್ದಾರೆ. ಅಂತಹ ಕೆಲವೇ ಕೆಲವು ಬೆರಳೆಣಿಕೆಯ ನಟರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರು ಕೂಡ ಒಬ್ಬರು. ಅವರ ವ್ಯಕ್ತಿತ್ವ ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಕೂಡ ಪ್ರತಿಯೊಬ್ಬರಿಗೂ ಮಾರ್ಗದರ್ಶನದಂತೆ ಇತ್ತು. ಅಭಿಮಾನಿಗಳು ಅವರನ್ನು ದೇವರ ಕೋಣೆಯಲ್ಲಿ ಫೋಟೋ ಇಟ್ಟು ದೇವರಂತೆ ಪೂಜಿಸುತ್ತಿದ್ದರು.

200 ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ರೀತಿಯ ಪಾತ್ರಗಳಲ್ಲಿ(Character) ಕಾಣಿಸಿಕೊಂಡಿದ್ದು ಆಡು ಮುಟ್ಟದ ಸೊಪ್ಪಿಲ್ಲ ವಿಷ್ಣುವರ್ಧನ್ ಅವರು ಮಾಡದ ಪಾತ್ರವಿಲ್ಲ ಎಂದು ಹೇಳಬಹುದಾಗಿದೆ. ಅದಕ್ಕಾಗಿ ಅವರನ್ನು ನಿರ್ದೇಶಕರ ನೆಚ್ಚಿನ ನಟ ಎಂಬುದಾಗಿ ಕರೆಯಲಾಗುತ್ತಿತ್ತು. ಅವರ ಅಗಲುವಿಕೆ ಕನ್ನಡ ಚಿತ್ರರಂಗಕ್ಕೆ ಭರಿಸಲಾಗದ ಶೂನ್ಯವನ್ನು ತಂದುಕೊಟ್ಟಿದೆ.

Dr Vishnuvardhan Smaraka

ಹಲವಾರು ವರ್ಷಗಳಿಂದ ವಿಷ್ಣು ದಾದಾ ಅವರ ಸ್ಮಾರಕ ನಿರ್ಮಾಣ ಆಗಬೇಕು ಎನ್ನುವ ಅಭಿಮಾನಿಗಳ ಒತ್ತಾಸೆ ಹಲವಾರು ಸರ್ಕಾರಗಳು ಬಂದು ಆಡಳಿತ ನಡೆಸಿ ಉರುಳಿ ಹೋದರು ಕೂಡ ನೆರವೇರಿರಲಿಲ್ಲ. ಆದರೆ ಈಗ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೊನೆಗೂ ಅಭಿಮಾನಿಗಳ ಆಸೆಯನ್ನು ಪೂರೈಸಿದ್ದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ವಿಷ್ಣುವರ್ಧನ್ ಎನ್ನುವಂತಹ ಮೇರು ನಟನ ಸ್ಮಾರಕವನ್ನು ಜಗತ್ತೇ ಮೆಚ್ಚುವಂತೆ ನಿರ್ಮಿಸಿದೆ. ಇನ್ನು ಈ ಸ್ಮಾರಕದ ಕುರಿತಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೀಡಿರುವ ಹೇಳಿಕೆ(Statement) ಏನೆಂಬುದನ್ನು ತಿಳಿಯೋಣ ಬನ್ನಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ರಮ ನಡೆದಿರುವುದು ಎಲ್ಲರಿಗೂ ಸಮಾಧಾನ ಹಾಗೂ ಸಂತೋಷವನ್ನು ತಂದಿದೆ. ಇದು ನೆರವೇರಲು ಕಾರಣವಾದಂತಹ ಅವರ ಕುಟುಂಬಸ್ಥರಿಗೂ ಹಾಗೂ ಅಭಿಮಾನಿಗಳಿಗೂ ಧನ್ಯವಾದಗಳು. ಈ ಕಾರ್ಯ ನೆರವೇರಲು ಕಾರಣರಾದಂತಹ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟ್ವೀಟ್(Tweet) ಮಾಡುವ ಮೂಲಕ ಕೋರಿದ್ದಾರೆ. ದರ್ಶನ್ ಅವರು ಕೇವಲ ವಿಷ್ಣುವರ್ಧನ್ ಅವರನ್ನು ಬಲ್ಲವರು ಮಾತ್ರ ಆಗಿರದೆ ಅವರ ಜೊತೆಗೆ ಈ ಬಂಧನ ಸಿನಿಮಾದಲ್ಲಿ ಕೂಡ ನಟಿಸಿದ್ದು ಮತ್ತೊಂದು ವಿಶೇಷವಾಗಿದೆ.

Leave a Comment

error: Content is protected !!