Kranti ಬಿಡುಗಡೆಗೂ ಮುನ್ನ ಕ್ರಾಂತಿ ಸಿನಿಮಾದ ಬಗ್ಗೆ ಕಾನ್ಫಿಡೆಂಟ್ ಆಗಿದ್ದ ಡಿ ಬಾಸ್ ಈಗ ಸೈಲೆಂಟ್ ಆಗಿರೋದಕ್ಕೆ ಇದೇ ಕಾರಣ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಿಡುಗಡೆಯಾಗಿ ಮೊದಲ ವಾರವನ್ನು ಪೂರೈಸಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಫ್ಯಾಮಿಲಿ ಆಡಿಯನ್ಸ್ ಕುಟುಂಬ ಸಮೇತನರಾಗಿ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದು ಕ್ರಾಂತಿ ಉತ್ತಮ ಕಲೆಕ್ಷನ್ ಅನ್ನೇ ಕಾಣುತ್ತಿದೆ ಎಂದು ಹೇಳಬಹುದಾಗಿದೆ. ಮೊದಲ ದಿನವೇ ಡಿ ಬಾಸ್ ಘಟನೆಯ ಕ್ರಾಂತಿ ಸಿನಿಮಾ 11 ಕೋಟಿಗೂ(11cr) ಅಧಿಕ ಕಲೆಕ್ಷನ್ ಮಾಡಿತ್ತು.

ಇನ್ನು ನೀವೆಲ್ಲ ಗಮನಿಸಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕ್ರಾಂತಿ ಸಿನಿಮಾದ ಬಿಡುಗಡೆಗು ಮುನ್ನ ಪ್ರತಿಯೊಂದು ಹಾಡು ಹಾಗೂ ಟೀಸರ್ ಮತ್ತು ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೆಂಬಿಡದಂತೆ ಪೋಸ್ಟ್ ಮಾಡುತ್ತಿದ್ದರು. ಆದರೆ ಬಿಡುಗಡೆಯಾದ ನಂತರ ದರ್ಶನ ಅವರಿಂದ ಒಂದೇ ಒಂದು ಪೋಸ್ಟ್ ಕೂಡ ಹೊರ ಬಂದಿಲ್ಲ. ಯಾಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾದ ಬಿಡುಗಡೆಯ ನಂತರ ಸಂಪೂರ್ಣವಾಗಿ ಮೌನ(Silence) ವಹಿಸಿದ್ದಾರೆ ಎಂಬುದಾಗಿ ಎಲ್ಲರಲ್ಲೂ ಅನುಮಾನ ಪ್ರಾರಂಭವಾಗಿದೆ.

Dboss kranti

ಇದಕ್ಕೆ ಉತ್ತರ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದಲೇ ಬಂದಿದೆ ಎಂದು ಹೇಳಬಹುದಾಗಿದೆ. ಹೌದು ಮಿತ್ರರೇ ಬಿಡುಗಡೆಯ ಮುನ್ನ ಸಂದರ್ಶನದಲ್ಲಿ(Interview) ಅವರು ಬಿಡುಗಡೆ ನಂತರ ಎಲ್ಲವನ್ನು ನನ್ನ ಸೆಲೆಬ್ರಿಟಿಗಳಿಗೆ ಅಂದರೆ ಅಭಿಮಾನಿಗಳಿಗೆ ಬಿಟ್ಟು ಕೊಟ್ಟಿದ್ದೇನೆ ಅವರೇ ನೋಡಿಕೊಂಡು ಹೋಗುತ್ತಾರೆ ಎಂಬುದಾಗಿ ದರ್ಶನ್ ಅವರು ಹೇಳಿದ್ದರು. ಈ ಮೂಲಕ ದರ್ಶನ್ ಅವರು ನಿರಾಳವಾಗಿ ಅಭಿಮಾನಿಗಳ ಅಭಿಮಾನವನ್ನು ಆನಂದಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಸಿನಿಮಾ ಕೂಡ ಒಂದೊಂದೇ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ.

ಇನ್ನು ಈಗಾಗಲೇ ಒಟ್ಟಾರೆಯಾಗಿ ಕ್ರಾಂತಿ ಸಿನಿಮಾ ಡಿಜಿಟಲ್ ಆಡಿಯೋ ಟಿವಿ ಹಾಗೂ ಸ್ಯಾಟಿಲೈಟ್ ಹಕ್ಕುಗಳು ಸೇರಿದಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಒಟ್ಟಾಗಿ ಲೆಕ್ಕಾಚಾರ ಮಾಡಿದರೆ 100 ಕೋಟಿಗಿಂತಲೂ ಅಧಿಕ ಗಳಿಕೆಯನ್ನು ಈಗಾಗಲೇ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಕ್ರಾಂತಿ ಸಿನಿಮಾ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂಬುದಾಗಿ ನಾವೆಲ್ಲರೂ ಹಾರೈಸೋಣ.

Leave a Comment

error: Content is protected !!