ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ – ಕೊನೆಗೂ ಒಂದಾದ್ರೂ ಸುದೀಪ್ ಹಾಗೂ ದರ್ಶನ್

Darshan And Sudeep On Kranti Pre Release Event about Story 2007 ಮಾರ್ಚ್ 15 ನಟ ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳಿಗೆ ಮರೆಯಲಾಗದಂತಹ ದಿನ ಇದ್ದಕ್ಕಿದ್ದಂತೆ ನಟ ದರ್ಶನ್ ಅವರ ಟ್ವಿಟರ್ ಪೇಜ್ ನಿಂದ ಒಂದು ಟ್ವೀಟ್ ಬರುತ್ತದೆ ಅದೇನೆಂದರೆ ಇನ್ನು ಮುಂದೆ ನಾನು ಮತ್ತು ಸುದೀಪ್ ಇಬ್ಬರು ಗೆಳೆಯರಲ್ಲ ಕೇವಲ ಸಿನಿಮಾದಲ್ಲಿ ಕೆಲಸ ಮಾಡುವ ಕಲಾವಿದರಷ್ಟೇ ಎಂಬುದಾಗಿ ಇದರಿಂದ ಅವರ ಅಭಿಮಾನಿಗಳು ಬಹಳ ಗೊಂದಲಕ್ಕೆ ಒಳಗಾಗುತ್ತಾರೆ ಯಾಕೆಂದರೆ ಅವರ ಗೆಳೆತನ ಆ ಮಟ್ಟಿಗೆ ಪ್ರಸಿದ್ಧಿಯಾಗಿತ್ತು ಇಂತಹ ಒಂದು ಟ್ವೀಟ್ ಅನ್ನು ಯಾರು ಕೂಡ ನಂಬಲು ಸಿದ್ದರಿರಲಿಲ್ಲ ಕೆಲವರು ಇದು ಸುಳ್ಳು ಸುದ್ದಿ ಎಂದು ಹೇಳಿಕೆ ನೀಡಿದ್ದರು ಇದರಿಂದ ದರ್ಶನವರು ಇದೇ ನನ್ನ ನಿಜವಾದ ಹೇಳಿಕೆ ಎಂದು ಸ್ಪಷ್ಟಣೆಯನ್ನು ಕೂಡ ನೀಡಿದ್ದರು ಇದಕ್ಕೆ ಸಂಬಂಧಪಟ್ಟ ಕೆಲವು ಕಾರಣಗಳನ್ನು ಕೂಡ ದರ್ಶನ್ ಅವರು ಹೇಳಿದ್ದರು.

Darshan And Sudeep On Kranti Pre Release Event

ಇನ್ನು ಇವರ ಅಭಿಮಾನಿಗಳ ಸ್ಟಾರ್ ವಾರ್ ದಿನೇ ದಿನೇ ಹೆಚ್ಚಳವಾಗುತ್ತಾ ಬಂತು ಆದರೆ ಕೆಲವೇ ಕೆಲವು ಅಭಿಮಾನಿಗಳು ಮಾತ್ರ ಇವರಿಬ್ಬರು ಬೇಗ ಒಂದಾಗಲಿ ಎಂದು ಆಶಿಸಿದ್ದರು ಸುದೀಪ ಅವರಿಗೆ ದರ್ಶನ್ ಅವರ ಮೇಲೆ ಅಪಾರ ಪ್ರೀತಿ ಇತ್ತು ಏಕೆಂದರೆ ಅವರು ದರ್ಶನ್ ಅವರ ಹಲವಾರು ಸಿನಿಮಾಗಳಿಗೆ ಶುಭಾಶಯ ಕೋರಿದ್ದರು ಒಮ್ಮೆ ಸಂದರ್ಶನದ ಸಮಯದಲ್ಲಿ ಅವರ ಮನೆಯಲ್ಲಿ ಇರುವಂತಹ ದರ್ಶನ್ ಫೋಟೋವನ್ನು ತೋರಿಸಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದರು ಈಗಲೂ ಸಹ ತಮಗೆ ದರ್ಶನವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂಬುದಾಗಿ ಸುದೀಪ್ ಅವರು ಹೇಳಿದ್ದಾರೆ ಆದರೆ ದರ್ಶನವರ ಕಡೆಯಿಂದ ಇವರ ಟ್ವೀಟ್ಗೆ ಯಾವುದೇ ರಿಪ್ಲೈ ಬಂದಿರಲಿಲ್ಲ.

ಇದೆಲ್ಲದರ ನಡುವೆ ದರ್ಶನ್ ಅವರ ಬಗ್ಗೆ ಪ್ರಚಾರಗಳು ಇಲ್ಲದೇ ಇರುವ ಸಮಯದಲ್ಲಿ ಹಾಗೆ ದರ್ಶನವರೇ ಎಲ್ಲೆಡೆ ಟಾರ್ಗೆಟ್ ಆಗಿರುವಂತಹ ಸಮಯದಲ್ಲಿ ಕ್ರಾಂತಿ ಸಿನಿಮಾದ ಪ್ರಚಾರ ಆರಂಭಿಸುತ್ತಾರೆ. ಈ ಸಂದರ್ಭದಲ್ಲಿ ದರ್ಶನ್ ಅವರು ಸುದೀಪ್ ಅವರ ಹೆಸರನ್ನ ಪ್ರಸ್ತಾಪಿಸುತ್ತಾರೆ ಐದು ವರ್ಷದಲ್ಲಿ ಸುದೀಪ್ ಅವರ ಹೆಸರನ್ನು ಹೇಳಿದ್ದು ಇದೇ ಸಮಯದಲ್ಲಿ ಎಂದು ಹೇಳಲಾಗಿದೆ ಅದಾದ ನಂತರದಲ್ಲಿ ಇತ್ತೀಚಿಗೆ ದರ್ಶನ್ ಅವರಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ವೈರಲ್ ಆಗಿತ್ತು.

ಈ ಬಗ್ಗೆ ಸುದೀರ್ಘ ಚರ್ಚೆ ಉಂಟಾದರೂ ಸಹ ಎಲ್ಲರೂ ಸುದೀಪ್ ಅವರಿಂದ ಏನಾದರೂ ಪ್ರತಿಕ್ರಿಯೆ ಬರಬಹುದು ಎನ್ನುವುದಾಗಿ ನಿರೀಕ್ಷಿಸಿದರು ಕೊನೆಯದಾಗಿ ಇದೀಗ ಸುದೀಪ ಅವರು ದರ್ಶನ್ ಅವರಿಗಾಗಿ ಪತ್ರವನ್ನು ಬರೆದಿದ್ದಾರೆ ಆದರೆ ಇದುವರೆಗೂ ಸುದೀಪ ಅವರ ಯಾವುದೇ ಟ್ವೀಟ್ಗೂ ಸಹ ದರ್ಶನ್ ಪ್ರತಿಕ್ರಿಯಿಸಿರಲಿಲ್ಲ ಆದರೆ ಈ ಬಾರಿ ದರ್ಶನ್ ಅವರು ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂಬುದಾಗಿ ಪ್ರತಿಕ್ರಿಯೆ ಮಾಡಿದ್ದಾರೆ ದರ್ಶನವರ ಈ ಪ್ರತಿಕ್ರಿಯೆಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ದರ್ಶನ್ ಅವರು ಇದಕ್ಕೆ ಪ್ರತಿಕ್ರಿಸಿದ ಕೆಲವೇ ಕೆಲವು ಸಮಯದಲ್ಲಿ ಅವರ ಅಭಿಮಾನಿಗಳು ಅವರಿಬ್ಬರ ಭಾವಚಿತ್ರಗಳನ್ನು ಪೋಸ್ಟರ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ ಅಂತೆಯೇ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇವರಿಬ್ಬರೂ ಒಂದಾಗುವುದಕ್ಕೆ ನಟ ಪುನೀತ್ ರಾಜಕುಮಾರ್ ಸಹ ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ ಹಾಗೆಯೇ ನಟ ಜಗ್ಗೇಶ್ ಅವರು ಕೂಡ ಇವರಿಬ್ಬರಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

ಇದೆಲ್ಲದರ ನಡುವೆ ಕ್ರಾಂತಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ಗೆ ಒಬ್ಬ ವಿಶೇಷ ಅತಿಥಿ ಎಂದರೆ ರವಿಚಂದ್ರನ್ ಇನ್ನೊಬ್ಬ ವಿಶೇಷ ಅತಿಥಿ ಎಂದರೆ ಅದೇ ನಟ ಸುದೀಪ್ ಸುದೀಪ್ ಅವರ ಆಗಮನದ ವಿಚಾರ ಸಿನಿಮಾ ಇಂಡಸ್ಟ್ರಿಯಲ್ ಖುಷಿಯನ್ನು ಹೆಚ್ಚಿಸಿದೆ.

ಅಪ್ಪು ಸ್ಥಾನವನ್ನು ಈ ನಟನಿಗೆ ಮಾತ್ರ ಕೊಡುತ್ತೇನೆ ಅಂದ್ರು ಶಿವಣ್ಣ, ಆ ನಟ ಯಾರು ಗೊತ್ತಾ, ಇಲ್ಲಿದೆ ನೋಡಿ

ಅಂದಹಾಗೆ ಸುದೀಪ್ ಹಾಗೂ ದರ್ಶನ್ ಇಬ್ಬರೂ ಸಹ ಕಷ್ಟಪಟ್ಟು ಸಿನಿಮಾ ಇಂಡಸ್ಟ್ರಿಗೆ ಪದರ್ಪಣೆ ಮಾಡಿದವರು ಅನೇಕ ಟೀಕೆಗಳನ್ನು ಸವಾಲುಗಳನ್ನು ಎದುರಿಸಿದ್ದಾರೆ ಇಂತಹ ಸಮಯದಲ್ಲಿಯೇ ಇಬ್ಬರು ಜೊತೆಯಾಗಿ ಎಲ್ಲವನ್ನ ಎದುರಿಸಿ ನಿಂತಿದ್ದರೂ ನಂತರದಲ್ಲಿ ಯಾರದೋ ಕೆಟ್ಟ ದೃಷ್ಟಿಯಿಂದ ಇವರಿಬ್ಬರ ಸ್ನೇಹ ಒಡೆದು ಹೋಯಿತು ಈಗ ಮತ್ತೆ ಅದು ಒಂದಾಗಿದೆ ಇವರಿಬ್ಬರೂ ಸಿನಿಮಾ ಲೋಕದಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಕೈಯಬೇಕಿದೆ ಇದು ಅಭಿಮಾನಿಗಳ ಆಸೆಯೂ ಹೌದು.

Leave a Comment

error: Content is protected !!