Vishnu Smaraka ವಿಷ್ಣು ಸ್ಮಾರಕ ಕಟ್ಟಿದ್ದೇ ತಪ್ಪಂತೆ. ನಟ ಚೇತನ್ ಅಪಸ್ವರ, ರೊಚ್ಚಿಗೆದ್ದ ವಿಷ್ಣು ಅಭಿಮಾನಿಗಳು.

Vishnu Smaraka ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಮರಣ ನಂತರ ಅವರ ಅಭಿಮಾನಿಗಳ ಕೋರಿಕೆ ಅವರ ಸ್ಮಾರಕವಾಗಿತ್ತು. ಹಲವಾರು ವರ್ಷಗಳು ಕಳೆದು ಹಲವಾರು ಪಕ್ಷಗಳ ಸರ್ಕಾರ(Government) ಬಂದು ಉರುಳಿ ಹೋದರು ಕೂಡ ವಿಷ್ಣುವರ್ಧನ್ ಅವರ ಸ್ಮಾರಕದ ಕುರಿತಂತೆ ಯಾರು ಕೂಡ ಚಕಾರ ಎತ್ತಿರಲಿಲ್ಲ. ಕೊನೆಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇತ್ತೀಚಿಗಷ್ಟೇ ಎಚ್ ಡಿ ಕೋಟೆಯ ಸಮೀಪದಲ್ಲಿ ವಿಷ್ಣುವರ್ಧನ ಅವರ ಭವ್ಯ ಸ್ಮಾರಕವನ್ನು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿ ನಿರ್ಮಿಸಿದ್ದು ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ.

ಇನ್ನು ಈ ಸ್ಮಾರಕದಲ್ಲಿ ಆಡಿಟೋರಿಯಂ(Auditorium) ಸೇರಿದಂತೆ ವಿಷ್ಣುವರ್ಧನ್ ಅವರಿಗೆ ಸಂಬಂಧಪಟ್ಟಂತಹ ಹಲವಾರು ಸ್ಮರಣಿಕೆಯನ್ನು ಅಭಿಮಾನಿಗಳಿಗಾಗಿ ಸ್ಮಾರಕದಲ್ಲಿ ಇರಿಸಲಾಗಿದೆ. ಅಭಿಮಾನಿಗಳು ಕೂಡ ಹತ್ತಾರು ವರ್ಷಗಳ ಬೇಡಿಕೆಯ ನಂತರ ಕೊನೆಗೂ ಕೂಡ ನಮ್ಮ ನೆಚ್ಚಿನ ನಟನಿಗೆ ಸ್ಮಾರಕ ನಿರ್ಮಾಣವಾಗಿದೆ ಎನ್ನುವ ಖುಷಿಯಲ್ಲಿದ್ದಾರೆ. ಆದರೆ ಇದರ ನಡುವೆ ಕನ್ನಡ ಚಿತ್ರರಂಗದ ಖ್ಯಾತ ನಟನೊಬ್ಬ ವಿಷ್ಣು ಸ್ಮಾರಕವನ್ನು ಕಟ್ಟಿಸಿರುವುದು ತಪ್ಪು ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

Chethan kumar

ಹೌದು ನಾವು ಮಾತನಾಡುತ್ತಿರುವುದು ಆ ದಿನಗಳು ಖ್ಯಾತಿಯ ನಟ ಚೇತನ್ ಅಹಿಂಸ ಅವರ ಕುರಿತಂತೆ. ಸದಾ ಒಂದಲ್ಲ ಒಂದು ವಿಚಾರಗಳಿಗಾಗಿ ಸುದ್ದಿಯಾಗುವ ಚೇತನ್ ಈ ಬಾರಿ ವಿಷ್ಣು ಸ್ಮಾರಕದ ಕುರಿತಂತೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಚೇತನ್ ಅವರ ಮಾತುಗಳನ್ನು ಕೇಳಿ ವಿಷ್ಣು ಅವರ ಅಭಿಮಾನಿಗಳು(Fans) ಕೂಡ ಕುಪಿತರಾಗಿದ್ದಾರೆ. ಅಷ್ಟಕ್ಕೂ ಚೇತನ್ ಅವರು ಸ್ಮಾರಕದ ಕುರಿತಂತೆ ನೀಡಿರುವ ಹೇಳಿಕೆಯಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಸರ್ಕಾರ ಹಣವನ್ನು ನಟರ ಸ್ಮಾರಕಗಳಿಗೆ ಖರ್ಚು ಮಾಡಬಾರದು ಎನ್ನುವ ಮೂಲಕ ಪರೋಕ್ಷವಾಗಿಯೇ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಸರ್ಕಾರ ಖರ್ಚು ಮಾಡಿರುವ ಹಣವನ್ನು ವಿರೋಧಿಸಿದ್ದಾರೆ. ಚೇತನ್ ಅವರ ಈ ಹೇಳಿಕೆ ವಿಷ್ಣುವರ್ಧನ್ ಅವರ ಅಭಿಮಾನಿಗಳಲ್ಲಿ ಬೇಸರವನ್ನು ಮೂಡಿಸಿದ್ದು ಚೇತನ್ ಅವರ ವಿರುದ್ಧ ರೊಚ್ಚಿಗೆಳುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಚೇತನ್ ನೀಡಿರುವ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!