ಕ್ರಾಂತಿ ಸಿನಿಮಾದ ಘೋಷಣೆಯ ಬೆನ್ನಲ್ಲೇ ಮಗನಿಗೆ ಶಾಲೆ ಬಿಡಿಸಲು ಮುಂದಾದ ಡಿಬಾಸ್! ಕಾರಣ ಏನು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಡಿ ಬಾಸ್ ಅವರು ಕೇವಲ ತೆರೆಯ ಮೇಲಿನ ವ್ಯಕ್ತಿತ್ವದಿಂದಾಗಿ ಮಾತ್ರವಲ್ಲದೆ ತೆರೆಯ ಹಿಂದೆ ನಿಜ ಜೀವನದಲ್ಲಿ ಕೂಡ ಎಲ್ಲರನ್ನೂ ಪ್ರೀತಿಸುವ ಹಾಗೂ ಗೌರವಿಸುವ ಗುಣಗಳಿಂದಾಗಿ ಕೂಡ ಫೇಮಸ್ ಆಗಿದ್ದಾರೆ. ಇದ್ದಿದ್ದನ್ನು ನೇರವಾಗಿ ಹೇಳುವ ಡಿ ಬಾಸ್ ಅವರ ವ್ಯಕ್ತಿತ್ವವೇ ಎಲ್ಲರ ನೆಚ್ಚಿನದಾಗಿದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೀವನದ 55ನೇ ಸಿನಿಮಾ ಆಗಿರುವ ಕ್ರಾಂತಿ ಇದೇ ಮುಂದಿನ ವರ್ಷದ ಜನವರಿ 26ರಂದು ಗಣರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆ ಆಗಲಿದೆ. ಕ್ರಾಂತಿ ಸಿನಿಮಾದ ಬಿಡುಗಡೆಯ ದಿನಾಂಕ ತಿಳಿಯುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಬಹಳಷ್ಟು ಸಂತೋಷದಲ್ಲಿದ್ದಾರೆ.

ಕ್ರಾಂತಿ ಸಿನಿಮಾ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ವ್ಯತ್ಯಾಸವನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಶಿಕ್ಷಣದ ಖಾಸಗೀಕರಣದ ಕುರಿತಂತೆ ಇರುವಂತಹ ಸಿನಿಮಾ ಆಗಿದೆ. ಇನ್ನು ಕ್ರಾಂತಿ ಸಿನಿಮಾದ ಬಿಡುಗಡೆಯ ದಿನಾಂಕದ ಘೋಷಣೆಯ ಸಂದರ್ಭದಲ್ಲಿ ಮಾಡಿದ ಪ್ರೆಸ್ ಮೀಟ್ ನಲ್ಲಿ ಡಿ ಬಾಸ್ ರವರು ತಮ್ಮ ಮಗನ ಶಾಲೆಗೆ ನಾನು ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿ ಕಟ್ಟುತ್ತಿದ್ದೇನೆ ಎಂದು ಹೇಳಿದ್ದು ನೆನಪಿರಬಹುದು.

ಆದರೆ ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈಗ ತಮ್ಮ ಮಗನನ್ನು ಆ ಶಾಲೆಯಿಂದ ಬಿಡಿಸುತ್ತಿದ್ದಾರೆ ಎಂಬುದಾಗಿ ಸುದ್ದಿಗಳು ಓಡಾಡುತ್ತಿವೆ. ಯಾಕೆ ಡಿ ಬಾಸ್ ಹೇಗೆ ಮಾಡುತ್ತಿದ್ದಾರೆ ಎಂಬುದು ಈಗಲೂ ಕೂಡ ತಿಳಿದು ಬಂದಿಲ್ಲ ಅಭಿಮಾನಿಗಳಲ್ಲೂ ಕೂಡ ಇದು ಸಾಕಷ್ಟು ಕುತೂಹಲವನ್ನು ತಂದಿದೆ. ಮುಂದಿನ ದಿನಗಳಲ್ಲಿ ಡಿ ಬಾಸ್ ಯಾಕಾಗಿ ಹೀಗೆ ಮಾಡಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!