Dboss ಕ್ರಾಂತಿ ಫಿಲಂ ಫ್ಲಾಪ್ ಆದ ಬೆನ್ನಲ್ಲೇ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಮೇಲೆ ಕೇಸ್! ಏನಿದು?

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ಇದೇ ಜನವರಿ 26ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿದ್ದರೂ ಕೂಡ ಅವರ ಸಿನಿಮಾ ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ತೋರಿಸದೆ ಇರುವುದು ಕೊಂಚಮಟ್ಟಿಗೆ ನಿರಾಸೆಯನ್ನು ಮೂಡಿಸುವಂತೆ ಮಾಡಿದೆ. ಸಿನಿಮಾದ ಕುರಿತಂತೆ ಸಾಕಷ್ಟು ನಕಾರಾತ್ಮಕ(Negative) ಪ್ರಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವುದನ್ನು ನೀವು ನೋಡಿರಬಹುದು.

ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿರುವಂತಹ ತಿಕ್ಕಾಟ ಕೂಡ ಸಿನಿಮಾದ ವಿರುದ್ಧವಾಗಿ ಜನರಲ್ಲಿ ಭಾವನೆಗಳು ಮೂಡುವಂತೆ ಮಾಡಿರುವುದಂತೂ ಸುಳ್ಳಲ್ಲ. ಹೀಗಾಗಿ ಕ್ರಾಂತಿ ಸಿನಿಮಾ ಆರಂಭಿಕ ದಿನಗಳಲ್ಲಿ ಸೋಲಿನ ಪ್ರಪಾತವನ್ನು ಕಾಣುವಂತಾಗಿದೆ. ಬಿಡುಗಡೆಗು ಮುನ್ನ ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಕ್ರಾಂತಿಯನ್ನು ಮೂಡಿಸಿದ್ದ ಕ್ರಾಂತಿ ಸಿನಿಮಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್(Houseful) ಬೋರ್ಡ್ ಗಳನ್ನು ಕಾಣಲು ಪರದಾಡುತ್ತಿದೆ.

ಇನ್ನು ಸಾಕಷ್ಟು ವಿವಾ’ದಾತ್ಮಕ ವಿಚಾರಗಳ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಮತ್ತೊಂದು ಕಷ್ಟ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ದರ್ಶನ್ ಹಾಗೂ ಅವರ ಕುಟುಂಬದ ಸಮಯವೇ ಸರಿಯಿಲ್ಲ ಎಂದು ಈ ಸಾಲು ಸಾಲು ಘಟನೆಗಳ ಸರಣಿಯಿಂದ ಹೇಳಬಹುದಾಗಿದೆ. ಅಷ್ಟಕ್ಕೂ ವಿಜಯಲಕ್ಷ್ಮಿ ಸೇರಿದಂತೆ ದರ್ಶನ್ ಮತ್ತು ಅವರ ಸಹಚರರ ಮೇಲೆ ಪ್ರಕರಣ ದಾಖಲಾಗಲು ನಿಜವಾದ ಕಾರಣ(Reason) ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಅಪರೂಪದ ವಲಸೆ ಪಕ್ಷಿಯನ್ನು ಅರಣ್ಯ ಕಾನೂನಿನ ವಿರುದ್ಧವಾಗಿ ಇಟ್ಟುಕೊಳ್ಳಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದೇ ಕಾರಣಕ್ಕಾಗಿ ಅರಣ್ಯ ಕಾನೂನು(Forest Rules) ಸಂಹಿತೆಯ ಪ್ರಕಾರ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ದರ್ಶನ್ ಅವರ ಆಪ್ತ ಆಗಿರುವ ನಾಗರಾಜ್ ಅವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವತ್ತಿರುವನು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!