Bhaiarathi Ranagal ಮುಫ್ತಿ ಸಿನಿಮಾ ನೀವೆಲ್ಲರೂ ನೋಡಿರುತ್ತೀರಿ ಅದರಲ್ಲಿ ಶಿವಣ್ಣ(Shivanna) ಭೈರತಿ ರಣಗಲ್ ಎನ್ನುವಂತಹ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ(Sri Murali) ಕಾಣಿಸಿಕೊಂಡರೆ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಈ ಸಿನಿಮಾ ಜನರ ಮೆಚ್ಚುಗೆಯನ್ನು ಪಡೆದು ಸೂಪರ್ ಹಿಟ್ ಕೂಡ ಆಗಿತ್ತು.
ಈ ಸಿನಿಮಾವನ್ನು ಹೊಸ ನಿರ್ದೇಶಕ ಆಗಿದ್ದ ನರ್ತನ್(Narthan) ರವರು ನಿರ್ದೇಶಕದ್ದು ಮೊದಲ ಸಿನಿಮಾದಲ್ಲಿಯೇ ಎಲ್ಲರ ಮನಗೆಲ್ಲಲು ಯಶಸ್ವಿಯಾಗಿದ್ದ ಈ ಯುವ ನಿರ್ದೇಶಕ.
ಈಗ ಸದ್ಯಕ್ಕೆ ಇವರಿಬ್ಬರೂ ಭೈರತಿ ರಣಗಲ್(Bhaiarathi Ranagal) ಎನ್ನುವಂತಹ ಸ್ಟ್ರೈಟ್ ಫಿಲಂನಲ್ಲಿ ಜೊತೆಯಾಗಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ಕೂಡ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದು ಸಿನಿಮಾದ ಮುಹೂರ್ತ ಪೂಜೆ ನಿನ್ನೆಯಷ್ಟೇ ನಡೆದಿದೆ. ಇದು ಶಿವಣ್ಣ ಹಾಗೂ ಗೀತಕ್ಕ ನಿರ್ಮಾಣದಲ್ಲಿಯೇ ಮೂಡಿ ಬರುತ್ತಿರುವ ಸಿನಿಮಾ ಆಗಿದೆ.
ಮುಫ್ತಿ ಸಿನಿಮಾದ ಒಂದು ಪಾತ್ರವನ್ನೇ ಆಧಾರವಾಗಿಟ್ಟುಕೊಂಡು ನರ್ತನ್ ಈ ಸಿನಿಮಾದ ಕಥೆಯನ್ನು ಬರೆದಿದ್ದು ಸಾಕಷ್ಟು ವರ್ಷಗಳಿಂದಲೂ ಕೂಡ ಈ ಸಿನಿಮಾಗಾಗಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದು ಕೊನೆಗೂ ಈ ಗಳಿಗೆ ನಿಜವಾಗಿಯೂ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಸಂತೋಷವನ್ನು ಹೆಚ್ಚಿಸಿದೆ. ಶಿವಣ್ಣ ಈ ಸಿನಿಮಾದಲ್ಲಿ ಅವರ ನೆಚ್ಚಿನ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.