ಯುವದಸರಾ ಕಾರ್ಯಕ್ರಮ ದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಗಳ ಗಳ ನೇ ಕಣ್ಣೀರು ಹಾಕಿದ್ದೇಕೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲ ಬಿಟ್ಟು ಹೋಗಿ ಈಗಾಗಲೇ 11 ತಿಂಗಳು ಕಳೆದಿದ್ದಾವೆ. ನಿಜಕ್ಕೂ ಕೂಡ ನಮ್ಮ ಕನ್ನಡ ಚಿತ್ರರಂಗದ ರಾಜಕುಮಾರ ಹಾಗೂ ಬಡವರ ಪಾಲಿನ ರಾಜರತ್ನ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿ ಹೋಗುತ್ತಾರೆ ಎಂಬ ಕನಸು ಕೂಡ ಬಿದ್ದಿರಲಿಲ್ಲ. ಪ್ರತಿಯೊಂದು ದಿನ ಪ್ರತಿಯೊಂದು ಕ್ಷಣ ಕೂಡ ಕನ್ನಡಿಗರು ತಮ್ಮ ಮನೆಯ ಮಗನನ್ನು ಕಳೆದುಕೊಂಡಿದ್ದೇವೆ ಎಂಬ ಭಾವನೆಯಲ್ಲಿ ಬದುಕುತ್ತಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ರಾಘಣ್ಣ ಇಬ್ಬರು ಕೂಡ ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಇನ್ನೂ ಆರು ದಿನಗಳ ಕಾಲ ಅದ್ದೂರಿಯಾಗಿ ವಿಶೇಷ ಮನರಂಜನೆಯ ಕಾರ್ಯಕ್ರಮಗಳು ಅಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಪ್ಪು ನಮನ ಎನ್ನುವ ವಿಶೇಷ ಕಾರ್ಯಕ್ರಮ ಕೂಡ ನಡೆದಿದ್ದು ಭಾವನಾತ್ಮಕವಾಗಿ ಎಲ್ಲರ ಮನಸ್ಸಿಗೆ ತಾಗಿತ್ತು.

ಗುರುಕಿರಣ್ ವಿಜಯ್ ಪ್ರಕಾಶ್ ಸೇರಿದಂತೆ ಹಲವಾರು ಖ್ಯಾತನಾಮ ಗಾಯಕರು ಅಪ್ಪು ನಮನ ಕಾರ್ಯಕ್ರಮದಲ್ಲಿ ಇದ್ದು ಈ ಕಾರ್ಯಕ್ರಮವನ್ನು ಅನುಶ್ರೀ ಅವರು ನಿರೂಪಣೆ ಮಾಡಿದ್ದರು. ಹಾಡಿನ ಮೂಲಕ ಇಡೀ ರಾತ್ರಿ ಕಾರ್ಯಕ್ರಮ ಅಪ್ಪುಮಯವಾಗಿತ್ತು ಎಂದರೆ ತಪ್ಪಾಗಲಾರದು. ಅಪ್ಪು ಈ ಕಾರ್ಯಕ್ರಮದಲ್ಲಿ ನಿಜಕ್ಕೂ ಕೂಡ ಇದ್ದಿದ್ದರೆ ಎನ್ನುವ ಕಲ್ಪನೆ ನಮಗೆ ರೋಮಾಂಚನ ಆಗುವಂತೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು.

ಇನ್ನು ಈ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳನ್ನು ಹಾಗೂ ಮೊಬೈಲ್ ಟಾರ್ಚ್ ಲೈಟ್ ಗಳನ್ನು ಹಿಡಿದು ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು ಕಂಡುಬಂದಿತು. ಇನ್ನು ಈ ಕಾರ್ಯಕ್ರಮದಲ್ಲಿ ಗಂಧದಗುಡಿ ಡಾಕ್ಯುಮೆಂಟರಿಯಾ ಟೀಸರ್ ಪ್ರಸಾರ ಆದ ಸಂದರ್ಭದಲ್ಲಿ ಅದನ್ನು ಕಂಡು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಣ್ಣೀರು ಹಾಕಿದ್ದು ಕೂಡ ಕಂಡುಬಂದಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಡೆಸಿಕೊಂಡು ಬಂದಿರುವ ಕೆಲಸವನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಆ ದೇವರು ನೀಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!