ಗಂಧದಗುಡಿ ಚಿತ್ರದಲ್ಲಿ ಅಪ್ಪು ಹೇಳಿರುವ ಆ ಒಂದು ಡೈಲಾಗ್ ಕೇಳಿ ಗಳ ಗಳನೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಲಾಕ್ಡೌನ್ ಸಂದರ್ಭದಲ್ಲಿ ಕರ್ನಾಟಕದ ಮೂಲೆ ಮೂಲೆಗೂ ಹೋಗಿ ನಮ್ಮ ರಾಜ್ಯದ ಪ್ರಾಕೃತಿಕ ಸೌಂದರ್ಯದ ಸಿರಿಯನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದು ಎಲ್ಲರೂ ಕೂಡ ನಮ್ಮ ಮಣ್ಣಿನ ಸೌಂದರ್ಯವನ್ನು ತಿಳಿಯುವ ಹಾಗೆ ಮಾಡಿರುವ ಮಹಾನುಭಾವನಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಗಂಧದ ಗುಡಿ ಸಿನಿಮಾದ ಮೂಲಕ ಮಾಡಿರುವ ಪ್ರಯೋಗವನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಯಾವುದೇ ಭಾಷೆಯಲ್ಲಿ ಕೂಡ ಒಬ್ಬ ಕಲಾವಿದ ಮಾಡಲು ಸಾಧ್ಯವೇ ಇಲ್ಲ.

ನ್ಯಾಷನಲ್ ಅವಾರ್ಡ್ ವಿನ್ನರ್ ನಿರ್ದೇಶಕ ಅಮೋಘವರ್ಷ ಅವರ ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಗೊತ್ತಿಲ್ಲದೇ ಇರುವಂತಹ ಕಾಡಿನ ನಡುವೆ ಮನೆಮಠ ಬಿಟ್ಟು ಬಂದಿದ್ದರು. ಹೀಗಾಗಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳು ಯಾವ ರೀತಿಯಲ್ಲಿ ಅಪಾಯಕಾರಿಯಾಗಿರುತ್ತವೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಹೇಗಿದ್ದರೂ ಕೂಡ ಧೈರ್ಯ ಮಾಡಿ ನಮ್ಮ ಪ್ರೇಕ್ಷಕರಿಗೆ ಹೊಸದನ್ನೇನಾದರೂ ತೋರಿಸಬೇಕು ಎನ್ನುವ ನಿಶ್ಚಯ ಮಾಡಿಕೊಂಡು ಅಪ್ಪು ಕಾಡಿಗೆ ಬರುತ್ತಾರೆ.

ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಮೋಘ ವರ್ಷ ಅವರಿಗೆ ಮನೆಯಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ಬಂದಿದ್ದೇನೆ ಸೇಫಾಗಿ ಮನೆಗೆ ವಾಪಸ್ ಹೋಗ್ತಿವಿ ತಾನೆ ಎಂಬುದಾಗಿ ಕೇಳಿದ್ದರು. ಈ ಡೈಲಾಗ್ಆ ಕೇಳಿ ಥಿಯೆಟರ್ ನಲ್ಲಿ ಇದ್ದ ಪ್ರತಿಯೊಬ್ಬರು ಕಣ್ಣೀರು ಹಾಕಿದರು. ಅಭಿಮಾನಿಗಳ jote ಕುಳಿತು ಕೊಂಡು ಸಿನೆಮಾ ನೋಡುತ್ತಿದ್ದ ಅಶ್ವಿನಿ ಹಾಗೂ ಮಗಳು ಕೂಡ ಈ ಡೈಲಾಗ್ನ ಕೇಳಿ ಗಳ ಗಳನೆ ಕಣ್ಣೀರು ಹಾಕಿದರು. ಅಪ್ಪು ಹೇಳಿರುವ ಆ ಡೈಲಾಗ್ ಅನ್ನು ಈಗ ಕೇಳಿದರೆ ಕರುಳು ಚೂರು ಅನ್ನುತ್ತೆ. ಗಂಧದ ಗುಡಿ ಚಿತ್ರಕ್ಕೆ ಕಾಡೆಲ್ಲಾ ಅಲೆದು ನಂತರ ಸೇಫ್ ಆಗಿ ಅಪ್ಪು ಮನೆಗೆ ಹೋದರು ಆದರೆ ನಂತರ ಆಸ್ಪತ್ರೆಗೆ ಹೋದವರು ವಾಪಸ ಸೇಫಾಗಿ ಮನೆಗೆ ಬಂದಿಲ್ಲ ಎನ್ನುವ ದುಃಖ ಪ್ರತಿಯೊಬ್ಬ ಕನ್ನಡಿಗನನ್ನು ಕೂಡ ಇಂದು ಆ ಡೈಲಾಗ್ ಕೇಳುವಾಗ ಬೆಂಬಿಡದಂತೆ ಕಾಡುತ್ತದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಗಂಧದಗುಡಿ ಸಿನಿಮಾ ರಾಜ್ಯ ದೇಶ ಹಾಗೂ ವಿದೇಶಗಳಲ್ಲಿ ದೊಡ್ಡಮಟ್ಟದ ಸಂಖ್ಯೆಯಲ್ಲಿ ಬಿಡುಗಡೆ ಕಂಡಿದ್ದು ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡಮಟ್ಟದ ಕಲೆಕ್ಷನ್ ಮಾಡುತ್ತಿದೆ. ಖಂಡಿತವಾಗಿ ಇದರಿಂದ ಬರುವ ಹಣವನ್ನು ಒಳ್ಳೆಯ ಕಾರ್ಯಗಳಿಗೆ ಹಾಗೂ ಒಳ್ಳೆಯ ಪ್ರತಿಭೆಗಳನ್ನು ಸಪೋರ್ಟ್ ಮಾಡುವುದಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಉಪಯೋಗಿಸುತ್ತಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

Leave a Comment

error: Content is protected !!