ಬರೀ ಅಪ್ಪ ಮಕ್ಕಳು ಸೇರಿ ತೆಲುಗು ಚಿತ್ರರಂಗವನ್ನು ಆಳುತ್ತಿದ್ದಾರೆ ಎಂದು ಆರೋಪ ಮಾಡಿದ ಹೆಬ್ಬುಲಿ ನಟಿ ಅಮಲಾ ಪೌಲ್!

ನಿಮಗೆಲ್ಲರಿಗೂ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅಮಲಾ ಪೌಲ್ ಅವರ ಬಗ್ಗೆ ಖಂಡಿತವಾಗಿ ತಿಳಿದಿರುತ್ತದೆ. ಖ್ಯಾತ ನಿರ್ದೇಶಕರೊಬ್ಬರನ್ನು ಮದುವೆಯಾಗಿ ನಂತರದ ದಿನಗಳಲ್ಲಿ ಅಮಲಾ ಪೌಲ್ ಅವರು ಅವರಿಗೆ ವಿವಾಹ ವಿಚ್ಛೇದನ ನೀಡಿರುವ ವಿಚಾರ ನಿಮಗೆಲ್ಲರಿಗೂ ಗೊತ್ತಿದೆ. ಸದ್ಯಕ್ಕೆ ಚಿತ್ರೀಕರಣದಲ್ಲಿ ಸಕ್ರಿಯರಾಗಿದ್ದಾರೆ.

ಹಲವಾರು ಬಾರಿ ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ವಿವಾದಾತ್ಮಕ ಸುದ್ದಿಗಳಿಗಾಗಿ ಹೆಸರುವಾಸಿಯಾಗಿರುವ ಅಮಲಾ ಪೌಲ್ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ ಹೆಬ್ಬುಲಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಆದರೆ ಈ ಬಾರಿ ಅಮಲಾ ಪೌಲ್ ಅವರು ಮತ್ತೊಂದು ದೊಡ್ಡ ಮಟ್ಟದ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ ಎಂದು ಹೇಳಬಹುದಾಗಿದೆ. ಅದು ಕೂಡ ಸಾವಿರಾರು ಕೋಟಿ ಸಿನಿಮಾಗಳನ್ನು ನೀಡುತ್ತಿರುವ ತೆಲುಗು ಚಿತ್ರರಂಗದ ವಿರುದ್ಧ ದೊಡ್ಡ ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ.

ತೆಲುಗು ಚಿತ್ರರಂಗ ಎನ್ನುವುದು ಸಿನಿಮಾ ಹಿನ್ನಲೆ ಉಳ್ಳ ಕುಟುಂಬಗಳಿಂದ ಆಳಲ್ಪಡುತ್ತಿದೆ ಎಂಬುದಾಗಿ ಅಮಲಾಪೌಲ್ ಹೇಳಿದ್ದಾರೆ. ಅಂದರೆ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬ ಜೂನಿಯರ್ ಎನ್ಟಿಆರ್ ಹಾಗೂ ಬಾಲಯ್ಯ ಅವರ ಎನ್ಟಿಆರ್ ಕುಟುಂಬ ಅಕ್ಕಿನೇನಿ ನಾಗಾರ್ಜುನ ಅವರ ಅಕ್ಕಿ ನೇನಿ ಕುಟುಂಬ ಹಾಗೂ ಅಲ್ಲು ಅರ್ಜುನ್ ಅವರ ಕುಟುಂಬದ ವಿರುದ್ಧ ನೇರವಾಗಿ ಅಮಲಾಪೌಲ್ ಆರೋಪವನ್ನು ಹೊರಿಸಿದ್ದಾರೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಅಮಲಾ ಪೌಲ್ ನೀಡಿರುವ ಹೇಳಿಕೆ ಯಾವ ರೀತಿಯಲ್ಲಿ ಅವರಿಗೆ ತಿರುಗುಬಾಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!