ಶಿವಣ್ಣನನ್ನು ನೋಡಿ ಕಲಿ ಎಂದು ಡಿ ಬಾಸ್ ಗೆ ಮತ್ತೆ ಚಾಟಿ ಬೀಸಿದ ಅಹೋರಾತ್ರ. ಕಾರಣ ಇಲ್ಲಿದೆ

Ahoratra slapped D Boss again saying that he learned from seeing Shivanna. Here’s the reason ಅಹೋರಾತ್ರ ಎನ್ನುವ ವ್ಯಕ್ತಿಯ ಕುರಿತಂತೆ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಕಳೆದ ಎರಡರಿಂದ ಮೂರು ವರ್ಷದಿಂದ ಚೆನ್ನಾಗಿ ತಿಳಿದಿದೆ ಎಂದು ಹೇಳಬಹುದಾಗಿದೆ. ಈತ ವೃಕ್ಷ ರಕ್ಷಕ ಹಾಗೂ ಮಹಿಳಾ ವಾದಿ ಎನ್ನುವುದಾಗಿ ಮೊದಲಿನಿಂದಲೂ ಕೂಡ ತನ್ನನ್ನು ತಾನು ಕರೆದುಕೊಳ್ಳುತ್ತಿದ್ದಾನೆ. ಇದರ ನಡುವಲ್ಲಿಯೇ ಕನ್ನಡ ಚಿತ್ರರಂಗದ (Kannada Film Industry) ಖ್ಯಾತ ನಟರ ವಿರುದ್ಧವೂ ಕೂಡ ತನ್ನ ನಾಲಿಗೆಯನ್ನು ಹರಿದುಬಿಟ್ಟಿದ್ದಾನೆ. ಮೊದಲಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ವಿರುದ್ಧ ಹರಿಹಾಯ್ದಿದ್ದ ಇವನು ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾನೆ.

ಮೊದಲಿಗೆ ರಮ್ಮಿ ಆಟದ ಜಾಹೀರಾತಿನಲ್ಲಿ (Advertisement) ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ತಲುಪುವಂತೆ ಕಿಚ್ಚ ಸುದೀಪ್ ಬದುಕುತ್ತಿದ್ದಾರೆ ಎಂಬುದಾಗಿ ಏಕವಚನದಿಂದ ಬಯ್ಯಲು ಪ್ರಾರಂಭಿಸಿದ್ದರು. ಇದಾದ ನಂತರ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಅಹೋರಾತ್ರ ತನ್ನ ಕೋಪವನ್ನು ಮಾತಿನ ಪದಗಳ ಮೂಲಕ ತೋರಿಸಲು ಪ್ರಾರಂಭಿಸಿದ್ದಾನೆ. ನಡೆದಿರುವ ವಿಚಾರಗಳೆಲ್ಲವೂ ಕೂಡ ಸೋಶಿಯಲ್ ಮೀಡಿಯಾದ (Social Media) ಮೂಲಕ ನಿಮಗೆ ತಲುಪಿದೆ ಎಂಬುದಾಗಿ ಭಾವಿಸುತ್ತೇವೆ.

ಹೌದು ಮಿತ್ರರೇ, ಹೆಣ್ಣುಮಕ್ಕಳ ಕುರಿತಂತೆ ಕೆಟ್ಟ ಪದಗಳನ್ನು ಉಪಯೋಗಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಆಪ್ತವಲಯದ ಕೆಲವರಿಗೆ ಬೈಯುತ್ತಿರುವ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿತ್ತು. ಇದನ್ನು ನೋಡಿರುವ ಅಹೋರಾತ್ರ ದರ್ಶನ್ ಅವರನ್ನು ಏಕವಚನದಿಂದ ಬೈದು ಹೆಣ್ಣು ನಿಂದಕ ಎಂಬುದಾಗಿ ಕರೆಯ ತೊಡಗಿದರು. ಕೇವಲ ಇಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ಶಿವಣ್ಣನನ್ನು ನೋಡಿ ಕಲಿ ಎಂಬುದಾಗಿ ಕೂಡ ಹೇಳಿದ್ದಾರೆ. ಅಷ್ಟಕ್ಕೂ ಯಾವ ವಿಚಾರವಾಗಿ ಶಿವಣ್ಣನನ್ನು ನೋಡಿ ಕಲಿ ಎಂಬುದಾಗಿ ಹೇಳಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾದ ಅನೌನ್ಸ್ಮೆಂಟ್ ಡೇಟ್ ಕೊನೆಗೂ ಲೀಕ್ ಆಯ್ತು.

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಇತ್ತೀಚಿಗಷ್ಟೇ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ವೇದ ಸಿನಿಮಾ ಬಿಡುಗಡೆಯಾಗಿತ್ತು. ವೇದ ಸಿನಿಮಾ ಶಿವಣ್ಣ ಅವರ 125ನೇ ಸಿನಿಮಾ ಆಗಿದ್ದು ಅದಕ್ಕಿಂತ ವಿಶೇಷವಾಗಿ ಈ ಸಿನಿಮಾದಲ್ಲಿ ಹೆಣ್ಣಿನ ಮಹತ್ವದ ಕುರಿತಂತೆ ಅರ್ಥಪೂರ್ಣವಾಗಿ ತೋರಿಸಲಾಗಿದೆ. ಇದನ್ನು ನೋಡಿದ ನಂತರ ನನ್ನ ಕಣ್ಣಿನಲ್ಲಿ ನೀರು ಬಂತು, ಹೆಣ್ಣಿನ ಮಹತ್ವದ ಕುರಿತಂತೆ ಇದರಲ್ಲಿ ತೋರಿಸಲಾಗಿದೆ ಆದರೆ ದರ್ಶನ್ ಕ್ರಾಂತಿ ಸಿನಿಮಾದ ಮೂಲಕ ಶಿಕ್ಷಣದ ಕುರಿತಂತೆ ತೋರಿಸುತ್ತೇನೆ ಎಂಬುದಾಗಿ ಹೇಳಿ ಪುಷ್ಪವತಿ ಎನ್ನುವ ಹಾಡನ್ನು (Song ) ಹಾಡುವ ಮೂಲಕ ಕೆಟ್ಟದಾಗಿ ಹೆಣ್ಣನ್ನು ಬಿಂಬಿಸಲಾಗಿದೆ ಎಂಬುದಾಗಿ ಅಸಮಾಧಾನದಿಂದ ಮತ್ತೆ ದರ್ಶನ್ ಅವರನ್ನು ಏಕವಚನದಿಂದ ಬೈದಿದ್ದಾರೆ.

Leave a Comment

error: Content is protected !!