ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿಯಾಗಿರುವ ನಟಿ ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ ಎಂದರೆ ತಪ್ಪಾಗಲಾರದು. ಯಾಕೆಂದರೆ ಅವರು ಬೇರೆ ನಟಿಯರ ಹಾಗೆ ಬೆಡಗು ಬಿನ್ನಾಣಗಳನ್ನು ಮಾಡಿಕೊಂಡ ಬಂದ ನಟಿ ಅಲ್ಲ.
ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸುವಂತಹ ನಟನೆಯನ್ನು ತೋರಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ತಮ್ಮ ಮುಗ್ಧ ಸೌಂದರ್ಯ ಹಾಗೂ ಪ್ರಭುದ್ಧ ನಟನೆಯಿಂದ ಗೆದ್ದವರು ಎನ್ನಬಹುದಾಗಿದೆ. ಇಂದಿನ ಕಾಲದಲ್ಲಿ ಯಾವುದೇ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲಂತಹ ಕೆಲವೇ ಕೆಲವು ಯುವ ನಾಯಕನಟಿಯರಲ್ಲಿ ಆದಿತಿ ಪ್ರಭುದೇವ ಅವರು ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅತಿಥಿ ಪ್ರಭುದೇವ ಈಗ ಮದುವೆಗೆ ಸಿದ್ದರಾಗಿ ನಿಂತಿದ್ದಾರೆ.
ಹೌದು ಮಿತ್ರರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಅದಿತಿ ಪ್ರಭುದೇವ ಅವರ ಎಂಗೇಜ್ಮೆಂಟ್ ಉದ್ಯಮಿ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಯಶಸ್ ಅವರ ಜೊತೆಗೆ ನಡೆದಿತ್ತು. ಸದ್ಯಕ್ಕೆ ಈಗ ಅರಿಶಿನ ಶಾಸ್ತ್ರ ಕಾರ್ಯಕ್ರಮ ನಡೆದಿದ್ದು ಅದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು ಎಲ್ಲರೂ ಕೂಡ ಅ ರೀತಿ ಪ್ರಭುದೇವ ಅವರ ಫೋಟೋ ನೋಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಶ್ವೇತ ಬಣ್ಣದ ಸೀರೆಯಲ್ಲಿ ಅರಿಶಿನ ನೀರಿನ ಕಾರಂಜಿಯಿಂದ ಅರಸಿನ ಬಣ್ಣದಿಂದ ಆವೃತವಾಗಿರುವ ಅತಿಥಿ ಪ್ರಭುದೇವ ಅವರ ಕ್ಯೂಟ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹಲ್ಚಲ್ ಸೃಷ್ಟಿಸಿದ್ದು ಇದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಆಗಲಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಜೋಡಿಗೆ ಎಲ್ಲರೂ ಕೂಡ ಶುಭ ಹಾರೈಸಿದ್ದಾರೆ.