ಮದುವೆಯ ಬಂಧವನ್ನು ಮುರಿದು, ವಿಚ್ಛೇದನವನ್ನು ಪಡೆಯಲು ಕಾರಣವೇನೆಂದು ತಿಳಿಸಿದ ನಟಿ ಪ್ರೇಮಾ. ಸುಳ್ಳು ಹೇಳಿ ಮದುವೆಯಾಗಿದ್ದ ಗಂಡ.

ಪ್ರೇಮ ಅವರು ಕನ್ನಡ ತಮಿಳು ತೆಲುಗು ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಡಾಕ್ಟರ್ ರಾಜಕುಮಾರ್ ಕುಟುಂಬದ ಪ್ರೊಡಕ್ಷನ್ ಹೌಸ್, ಅಭಿನಯದಲ್ಲಿ ಆಸಕ್ತಿ ಇರುವ ಹೊಸ ಮುಖಕ್ಕಾಗಿ ಹುಡುಕಾಡುತ್ತಿರುತ್ತಾರೆ. ಅದೇ ವೇಳೆಯಲ್ಲಿ ಪ್ರೇಮ ಅವರ ಫೋಟೋವನ್ನು ನೋಡಿ ಅವರನ್ನೇ ಚಿತ್ರಕ್ಕಾಗಿ ಆಯ್ಕೆ ಮಾಡುತ್ತಾರೆ. ನಂತರ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆತು ಓಂ, ಯಜಮಾನ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಪ್ರೇಮ ಅವರು ಕೊಡವ ಸಮುದಾಯಕ್ಕೆ ಸೇರಿದ ಚಟ್ಟಿಚ ಹಾಗೂ ಕಾವೇರಿ ಅವರ ಮುದ್ದಿನ ಮಗಳಾಗಿ ಜನಿಸಿ, ಒಳ್ಳೆಯ ಶಿಕ್ಷಣವನ್ನು ಪಡೆದಿರುತ್ತಾರೆ. ಚಿಕ್ಕಂದಿನಲ್ಲಿ ಸ್ಪೋರ್ಟ್ಸ್ ನಲ್ಲಿ ಆಸಕ್ತಿಯನ್ನು ಹೊಂದಿದ ಪ್ರೇಮ ಅವರು ಬೆಳೆಯುತ್ತಾ ಬೆಳೆಯುತ್ತಾ ಅಭಿನಯದಲ್ಲಿ ಆಸಕ್ತಿಯನ್ನು ತೋರುತ್ತಾರೆ. ಅಲ್ಲದೆ ಚಿತ್ರರಂಗದಲ್ಲಿ ಕಾಲಿಟ್ಟು ಯಶಸ್ಸನ್ನು ಗಳಿಸುತ್ತಾರೆ. ಕುಟುಂಬದವರ, ಸಂಬಂಧಿಕರ ಸಮ್ಮುಖದಲ್ಲಿ ಕೊಡವ ಸಮುದಾಯಕ್ಕೆ ಸೇರಿದ ಜೀವನ್ ಅಪ್ಪಚ್ಚು ಎಂಬುವವರನ್ನು ವಿವಾಹವಾಗುತ್ತಾರೆ.

ವಿವಾಹದ ಬಳಿಕ ಪ್ರೇಮ ಅವರು ಅಂದರೆ 2006ರ ನಂತರ ಚಿತ್ರರಂಗದಿಂದ ಕೊಂಚ ದೂರವಿರುತ್ತಾರೆ. ‘ತಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್; ಬೆಂಗಳೂರಿನಲ್ಲಿ ನನ್ನದೇ ಸ್ವಂತ ದೊಡ್ಡದಾದ ಕಂಪನಿ ಇದೆ’ ಎಂದು ನಂಬಿಸಿ ವಿವಾಹವಾಗಿದ್ದ ಜೀವನ ಅಪ್ಪಚ್ಚು ಅವರೊಂದಿಗೆ ವರುಷಗಳು ಉರುಳಿದಂತೆ ಮನಸ್ತಾಪಗಳು ಜಾಸ್ತಿಯಾಗುತ್ತಾ ಹೋಗುತ್ತವೆ.

‘ಪ್ರೇಮ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ’ ಎಂದು ಅಭಿಮಾನಿಗಳು ಶಿಶಿರ ಚಿತ್ರವನ್ನು ವೀಕ್ಷಿಸಿದ ಬಳಿಕ ಚರ್ಚೆ ಮಾಡಿದ್ದರು. ಶಿಶಿರ ಚಿತ್ರದಲ್ಲಿ ಪ್ರೇಮಾ ಅವರು ಗಿಡ್ಡವಾದ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಪ್ರೇಮಾ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂದು ಊಹೆ ಮಾಡಿದ್ದರಂತೆ.

ಪ್ರೇಮ ಅವರು ಸುಳ್ಳು ಹೇಳಿ ಯಾಮಾರಿಸಿದ್ದ ಗಂಡನಿಂದ 2016ರಲ್ಲಿ ವಿಚ್ಛೇದನ ಪಡೆದು ಚಿತ್ರರಂಗಕ್ಕೆ ರೀ ಎಂಟ್ರಿ ಮಾಡಿದ್ದರು. ವಿಚ್ಛೇದನದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕಾಲ ಸುದ್ದಿಯಲ್ಲಿರುತ್ತಿದ್ದ ಪ್ರೇಮ ಅವರು, ಸಂದರ್ಶನಕಾರರೊಬ್ಬರು ವೈವಾಹಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರ ನೀಡಿದ್ದಾರೆ. ಹಿಂದೆಂದೂ ಸಂಸಾರಿಕ ಜೀವನದ ಬಗ್ಗೆ ಪ್ರೇಮ ಅವರು ಹೇಳಿಕೊಂಡಿರಲಿಲ್ಲ. “ನನ್ನ ವೈವಾಹಿಕ ಜೀವನ ಅಷ್ಟೊಂದು ಕಂಫರ್ಟ್ ಆಗಿರಲಿಲ್ಲ ಮತ್ತು ದಾಂಪತ್ಯ ಜೀವನದಲ್ಲಿ ಭರವಸೆಯ ಕೊರತೆಯಾಗಿತ್ತು. ನಾನು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಲೆ ವಿವಾಹವಾದೆ; ಅದು ನನ್ನ ಜೀವನದ ಒಂದು ಭಾಗವಷ್ಟೇ” ಎಂದು ಪ್ರೇಮಾ ಅವರು ಹೇಳಿದ್ದಾರೆ.

Leave a Comment

error: Content is protected !!