ಪತ್ನಿ ಮಹಾಲಕ್ಷ್ಮಿಯ ಕೈ ಹಿಡಿದು ಪಟಾಕಿ ಹೊಡೆಯುವುದು ಹೇಗೆ ಎಂದು ಹೇಳಿ ಕೊಟ್ಟ ರವೀಂದರ್. ಕ್ಯೂಟ್ ಕಪಲ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ತಮಿಳುನಾಡಿನ ಈ ಜೋಡಿ ಕಳೆದ 2ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ನಿರ್ಮಾಪಕರಾಗಿರುವ ರವಿಂದರ್ ಎಂಬುವವರನ್ನು  ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆಯಾಗಿದ್ದರು ಈ ಜೋಡಿ ಮದುವೆಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇವರಿಬ್ಬರ ಫೋಟೋಗಳಂತೂ ಎಲ್ಲ ಟ್ರೋಲ್ ಆಗುತ್ತಿತ್ತು. ಒಂದು ಜೋಡಿಯ ಮದುವೆ ಬಗ್ಗೆ ಇಡೀ ದೇಶದಲ್ಲಿಯೇ ಸಂಚಲನ ಸೃಷ್ಟಿ ಮಾಡಿತ್ತು ಇದೇ ಮೊದಲ ಬಾರಿ ಅನಿಸುತ್ತೆ.

ಕೇವಲ ಒಂದು ಮದುವೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡದ ಕಾರಣ ಕೂಡ ಇದೆ. ನಿರ್ಮಾಪಕರು  ರವಿಂಧರ್ ಅವರು  ನೋಡೋಕೆ ತುಂಬಾ ದಪ್ಪ ಮತ್ತು ಕಪ್ಪಗೆ ಇದ್ದಾರೆ. ಆಗಿ ನಟಿ ಮಹಾಲಕ್ಷ್ಮಿ ನೋಡೋಕೆ ಸ್ಲಿಮ್ ಆಗಿ ಬೆಳ್ಳಗೆ ಮತ್ತು ಮತ್ತು ಸುಂದರವಾಗಿದ್ದಾರೆ. ಇಂತಹ ಸುಂದರವಾಗಿರೋ ಯುವತಿ ಅಂತಹ ದಪ್ಪವಾಗಿರುವ ಪುರುಷನನ್ನು ಏಕೆ ಮದುವೆಯಾದರಂತೂ ಹಲವು ಟೀಕೆಗಳು ವಾದವೂ ಅಷ್ಟೇ ಅಲ್ಲದೆ ಈ ಜೋಡಿಗೆ ಇದು ಎರಡನೇ ಮದುವೆ. ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದ್ರ ಇಬ್ಬರಿಗೂ ಇದು ಎರಡನೇ ಮದುವೆ. ಕೇವಲ ಹಣಕ್ಕೋಸ್ಕರ ನಟಿ ಮಹಾಲಕ್ಷ್ಮಿ ರವಿಂದರ್ ನನ್ನು ಮದುವೆಯಾಗಿದ್ದಾಳೆ ಎಂಬೆಲ್ಲಾ ಟೀಕೆಗಳು ಹರಿದಾಡಿದವು.

ಆದರೆ ಆಶ್ಚರ್ಯಕರ ಸಂಗತಿಯೇನೆಂದರೆ ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕರ ರವೀಂದರ್  ಇದ್ಯಾವ ಟೀಕೆಗಳಿಗೂ ಕೂಡ ತಲೆಕೆಡಿಸಿಕೊಳ್ಳಲಿಲ್ಲ. ತಮ್ಮ ಪಾಡಿಗೆ ತಾವು ಮದುವೆಯಾಗಿ ಹನಿಮೂನ್ ಮಾಡಿಕೊಂಡು ಪ್ರವಾಸ ಮಾಡಿಕೊಂಡು ಆರಾಮಾಗಿ ನಲಿವಿನಿಂದ ಜೀವನ ಸಾಗಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರೆ ಕ್ಯೂಟ್ ವಿಡಿಯೋಗಳನ್ನು  ಪೋಸ್ಟ್ ಮಾಡುತ್ತಿದ್ದಾರೆ. ಹಾಗೆ ಇದೆ ದೀಪಾವಳಿ ಹಬ್ಬದಂದು ನಿರ್ಮಾಪಕ ರವೀಂದರ್ ನಟಿ ಮಹಾಲಕ್ಷ್ಮಿ ಭರ್ಜರಿ ಗಿಫ್ಟ್ ಕೂಡ ನೀಡಿದ್ದಾರೆ. ದೀಪಾವಳಿ ಹಬ್ಬದ ದಿನವೇ 90 ಲಕ್ಷ ರೂಪಾಯಿಯ ಬೆಲೆಯ MG ಕಂಪೆನಿಯ ಕಾರೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ದೀಪಾವಳಿ ಹಬ್ಬದ ದಿನ ಪತ್ನಿ ಮಹಾಲಕ್ಷ್ಮಿ ಗೆ ಪಟಾಕಿ ಸಿಡಿಸುವುದು ಹೇಗೆ ಅಂತ ಹೇಳಿ ಕೊಟ್ಟ ವಿಡಿಯೋ ಇದೀಗ ವೈರಲ್ ಆಗಿದೆ..

https://youtu.be/bkyPMtY65XQ

ಲಕ್ಷ್ಮಿ ಪಟಾಕಿಯ ಸರಕ್ಕೆ ಅಗರ ಬತ್ತಿ ಹಿಡಿದು ಹೇಗೆ ಸಿಡಿಸ ಬೇಕು ಎಂದು ಮಹಾಲಕ್ಷ್ಮಿ ಗೆ ರವೀಂದರ್ ಅಚ್ಚು ಕಟ್ಟಾಗಿ ಹೇಳಿಕೊಟ್ಟಿದ್ದಾರೆ. ಅಗರ ಬತ್ತಿ ಹಿಡಿದು ಕೊಂಡಿದ್ದ ಮಹಾಲಕ್ಷ್ಮಿ ಪಕ್ಕದಲ್ಲೇ ನಿಂತು ಧೈರ್ಯ ತುಂಬಿದರು. ಪಟಾಕಿಯ ಸರಕ್ಕೆ ಬೆಂಕಿ ಕಿಡಿ ತಗುಲಿದ ತಕ್ಷಣವೇ ರವೀಂದರ್ ಮಹಾಲಕ್ಷ್ಮಿ ಯ ಕೈ ಎಳೆದುಕೊಂಡು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಪಟಾಕಿ ಡುಮ್ ಡುಂ ಎನಿಸುವುದನ್ನು ಇಬ್ಬರು ಕಣ್ಣಾರೆ ನೋಡಿದರು. ಇವರಿಬ್ಬರ ಈ ದೃಶ್ಯ ನೋಡೋಕೆ ನಾಲ್ಕು ಕಣ್ಣು ಸಾಲದು.

Leave a Comment

error: Content is protected !!