ದೊಡ್ಮನೆ ಅವರು ಮಾಡಿರುವ ಕೆಲಸದ ಬಗ್ಗೆ ದರ್ಶನ್ ಅವರ ತಾಯಿ ಇದ್ದಕ್ಕಿದ್ದಂತೆ ಹೇಳಿದ್ದೇನು ಗೊತ್ತಾ?

Actor Darshan Mother About talk raj family: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಂದೆ ದೊಡ್ಡ ನಟ ಆಗಿದ್ದರೂ ಕೂಡ ಅವರ ನಂತರ ಚಿತ್ರರಂಗದಲ್ಲಿ ಬೆಳೆಯುವುದಕ್ಕೆ ನಿಜವಾಗಲೂ ಕಾರಣವಾಗಿದ್ದು ಅವರ ಸ್ವಂತ ಪ್ರತಿಭೆ ಪರಿಶ್ರಮ ಹಾಗೂ ಅವರು ಅವಮಾನಗಳನ್ನು ಎದುರಿಸಿರುವ ರೀತಿ. ಇಂದು ಅವರನ್ನು ನಾವು ಕನ್ನಡ ಚಿತ್ರರಂಗದ ಖ್ಯಾತ ಚಲನ ಚಿತ್ರ ನಟನ ಮಗ ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಸಿನಿಮಾ ಕರಿಯರ್ (Career) ಅನ್ನು ತಾವೇ ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡವರು ಎಂದು ಹೇಳಬಹುದಾಗಿದೆ.

ಇನ್ನೂ ಇಂದು ಕನ್ನಡ ಚಿತ್ರರಂಗದಲ್ಲಿ ಎಷ್ಟೇ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಿಡದಂತಹ ಕೋಟ್ಯಂತರ ಅಭಿಮಾನಿಗಳನ್ನು ( Fans) ಡಿ ಬಾಸ್ ಸಂಪಾದಿಸಿದ್ದಾರೆ. ಇಂತಹ ಅಭಿಮಾನಿಗಳನ್ನು ಹೊಂದಿರುವ ನಿಜಕ್ಕೂ ದರ್ಶನ್ ಅವರೇ ಧನ್ಯ ಎಂದರು ತಪ್ಪಾಗಲಾರದು.

https://youtu.be/hA4U87rrPnk

ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಇದರ ನಡುವಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಆಗಿರುವ ಮೀನಾ ತೂಗುದೀಪ್ ಅವರು ಮಾತನಾಡಿರುವಂತಹ ಒಂದು ಆಡಿಯೋ ವೈರಲ್ (Viral ) ಆಗುತ್ತಿದೆ. ಅಷ್ಟಕ್ಕೂ ಅವರು ರಾಜವಂಶದ ಕುರಿತಂತೆ ಹೇಳಿರುವ ಮಾತು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕ್ರಾಂತಿ ಸಿನಿಮಾದ ಐಟಂ ಸಾಂಗ್ ಗೆ ರಚಿತಾ ರಾಮ್ ಕ್ಯೂಟ್ ಸ್ಟೆಪ್ ಹಾಕಿರೋ ವಿಡಿಯೋ ವೈರಲ್.

ಅಂದಿನ ಕಾಲಕ್ಕೆ ತೂಗುದೀಪ್ ಶ್ರೀನಿವಾಸ್ ಅರವರಿಗಾಗಿ ವರ್ಷಕ್ಕೆ ಕಡಿಮೆ ಎಂದರು ನಾಲ್ಕರಿಂದ ಐದು ಸಿನಿಮಾಗಳನ್ನು ಅಣ್ಣಾವ್ರ ಬ್ಯಾನರ್ ನಲ್ಲಿ ಮಾಡಿಯೇ ಮಾಡುತ್ತಿದ್ದರು. ಅಣ್ಣಾವ್ರು ನಟಿಸುವ ಪ್ರತಿಯೊಂದು ಸಿನಿಮಾಗಳಲ್ಲೂ ಕೂಡ ತೂಗುದೀಪ್ ಶ್ರೀನಿವಾಸ್ ಅವರು ಬೇಕೇ ಬೇಕು ಎಂಬುದಾಗಿ ಅಣ್ಣಾವ್ರು ಹಠ ಹಿಡಿಯುತ್ತಿದ್ದರಂತೆ. ಒಟ್ಟಾರೆಯಾಗಿ ಅಂದಿನ ಕಾಲಕ್ಕೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ದುಡಿಮೆ ಆಗುವ ರೀತಿಯಲ್ಲಿ ಅಣ್ಣಾವ್ರು ತಮ್ಮ ಸಿನಿಮಾಗಳಲ್ಲಿ ತೂಗುದೀಪ್ ಶ್ರೀನಿವಾಸ್ ಅವರಿಗೆ ಅವಕಾಶವನ್ನು ನೀಡುತ್ತಿದ್ದರು ಎಂಬುದಾಗಿ ಮೀನಾ ತೂಗುದೀಪ ಅವರು ಹೇಳುತ್ತಾರೆ. ಅಣ್ಣಾವ್ರ ಕುಟುಂಬದ ಈ ದೊಡ್ಡತನದ ಕುರಿತಂತೆ ಮೀನಾ ತೂಗುದೀಪ ಅವರು ಹೇಳಿರುವ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ( Opinion ) ಹಂಚಿಕೊಳ್ಳಿ.

Leave a Comment

error: Content is protected !!