ಮಂಗಳಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಕೆಲಸವನ್ನು ಮಾಡಿ ನೀವು ಕೋಟ್ಯಾಧಿಪತಿ ಆಗ್ತೀರಾ!

Culture ಪುರಾಣ ಗ್ರಂಥಗಳಿಂದ ಹಿಡಿದು ಇಂದಿನವರೆಗೂ ಕೂಡ ಪ್ರತಿಯೊಂದು ವಿಚಾರಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಕಿನ್ನರರು ಅಥವಾ ಮಂಗಳಮುಖಿಯರ(Transgender) ಕುರಿತಂತೆ ಉಲ್ಲೇಖವಿದೆ. ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಹಾಗೂ ಮಂಗಳಕಾರ್ಯಗಳಲ್ಲಿ ಅವರ ಅಸ್ತಿತ್ವ ಖಂಡಿತವಾಗಿ ಇದ್ದೇ ಇರುತ್ತದೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ನಂಬುತ್ತಾರೆ ಹಾಗೂ ಅವರು ಇರಲೇಬೇಕು ಎನ್ನುವುದಾಗಿ ಭಾವಿಸುತ್ತಾರೆ ಕೂಡ.

ಹೀಗಾಗಿ ಅರ್ಧನಾರೀಶ್ವರನ(Ardha Nareeshwara) ಸ್ವರೂಪವಾಗಿರುವ ಮಂಗಳಮುಖಿಯರು ನೀವು ಎಲ್ಲಾದರೂ ಶುಭ ಕೆಲಸಕ್ಕೆ ಹೋದಾಗ ಅವರು ನಿಮಗೆ ಆಶೀರ್ವಾದ ಮಾಡುವಂತಹ ಕೆಲಸವನ್ನೇ ಮಾಡಿ ಆಗ ನಿಮ್ಮ ಜೀವನದಲ್ಲಿ ಗೆಲುವಿನ ಸರಮಾಲೆಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹೀಗಾಗಿ ನೀವೆಲ್ಲಾದರೂ ಹೋಗುತ್ತಿರುವಾಗ ಮಂಗಳ ಮುಖಿಯರು ಅಡ್ಡ ಬಂದರೆ ಅವರನ್ನು ಬರಿಗೈಯಲ್ಲಿ ಕಳಿಸಬೇಡಿ ಯಾಕೆಂದರೆ ಅವರ ಶಾಪ ನಿಮಗೆ ಕೆಡುಕನ್ನು ಉಂಟುಮಾಡುತ್ತದೆ.

ನಿಮ್ಮ ಮನೆಗೆ ಬಂದಾಗ ಅಥವಾ ನೀವು ಎಲ್ಲಾದರೂ ಹೋಗುತ್ತಿರುವಾಗ ಮಂಗಳಮುಖಿಯರು(Transgender) ಕಂಡರೆ ಅವರಿಗೆ ಹಣವನ್ನು ನೀಡಿ ಹಾಗೂ ಅವರಿಂದ ಆಶೀರ್ವಾದ ಪಡೆದುಕೊಂಡು ಮತ್ತೆ ಬನ್ನಿ ಎನ್ನುವ ವಾಕ್ಯವನ್ನು ಹೇಳಬೇಕಂತೆ. ಇನ್ನು ಯಾವತ್ತೂ ಕೂಡ ಎಣ್ಣೆ ಹಾಗೂ ಪೊರಕೆಯನ್ನು ಮಂಗಳಮುಖಿಯಾಗಿ ದಾನ ಮಾಡಬಾರದಂತೆ ಇದರಿಂದಾಗಿ ದಾನ ಮಾಡುವಂತಹ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ.

ಮಂಗಳಮುಖಿಯರಿಗೆ ಹಣ(Money) ಧಾನ್ಯ ಹಾಗೂ ಹೊಸ ಬಟ್ಟೆಗಳನ್ನು ದಾನ ನೀಡಿದರೆ ನಿಮ್ಮ ಜೀವನದಲ್ಲಿ ಯಶಸ್ಸಿನ ರಹಧಾರಿ ಪ್ರಾರಂಭವಾಗಿ ಖಂಡಿತವಾಗಿ ನೀವು ನಿಮ್ಮ ಜೀವನದಲ್ಲಿ ಉತ್ತುಂಗವನ್ನು ಸಾಧಿಸಲಿದ್ದೀರಿ ಎಂಬುದಾಗಿ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ನಮ್ಮ ಪೂರ್ವಜರು ಈ ಮಾಹಿತಿಗಳನ್ನು ಒಂದಲ್ಲ ಒಂದು ಒಳ್ಳೆಯ ಕಾರಣಕ್ಕಾಗಿ ನಮಗೆ ಹೇಳಿದ್ದಾರೆ ಹೀಗಾಗಿ ಇದನ್ನು ಹಿಂಬಾಲಿಸುವ ಮೂಲಕ ನಮ್ಮ ಯಶಸ್ಸನ್ನು ನಾವೇ ಸೃಷ್ಟಿಸೋಣ. ಹಾಗೂ ಮಂಗಳಮುಖಿಯರು ಎಲ್ಲೇ ಸಿಕ್ಕಿದರೂ ಕೂಡ ಅವರನ್ನು ಗೌರವ ಭಾವದಿಂದ ಕಾಣುವುದನ್ನು ಮಾತ್ರ ಮರೆಯಬೇಡಿ.

Leave a Comment

error: Content is protected !!