Hindu Culture: ಈ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ದುರಾದೃಷ್ಟ ಎಲ್ಲವೂ ಕೂಡ ಕಳೆದು ಹೋಗುತ್ತದೆ.

Hindu Culture ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ಸಾಕಷ್ಟು ಕೆಲಸಗಳನ್ನು ಮಾಡುವುದರಿಂದಾಗಿ ಅದಕ್ಕೆ ಅದರದ್ದೇ ಆದ ಮಹತ್ವದಿಂದ ಪುಣ್ಯ ಸಂಪಾದನೆಯನ್ನು ಮಾಡಬಹುದು. ಇನ್ನು ಬೆಳಗ್ಗೆ ಎದ್ದು ಸ್ನಾನದಿಗಳನ್ನು ಪೂಜಾರಿಗಳನ್ನು ಮುಗಿಸಿಕೊಂಡು ನೀವು ಬಡವರಿಗೆ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಪುಣ್ಯ ಸಂಪಾದನೆ ಆಗುತ್ತದೆ ಎಂಬುದಾಗಿ ಉಲ್ಲೇಖವಿದೆ ಬನ್ನಿ ಅದರ ಕುರಿತಂತೆ ವಿವರವಾಗಿ ತಿಳಿಯೋಣ.

ನೀರನ್ನು ದಾನ ಮಾಡುವುದು: ಯಾರಾದರೂ ಆಯಾಸದಿಂದ ಬಳಲಿ ನೀರಿಗಾಗಿ ಪರದಾಡುತ್ತಿರುವಂತಹ ಬಡವರನ್ನು ಅಥವಾ ಭಿಕ್ಷುಕರನ್ನು ಕಂಡರೆ ಅವರಿಗೆ ಬಾಯಾರಿಕೆಯನ್ನು ಪರಿಹರಿಸಿಕೊಳ್ಳಲು ನೀರನ್ನು ನೀಡಿದರೆ ಖಂಡಿತವಾಗಿ ಅದು ನಿಮಗೆ ಪುಣ್ಯ ಸಂಪಾದನೆಯನ್ನು ಮಾಡಿಕೊಡುತ್ತದೆ. ಬೇರೆಯವರ ಬಾಯಾರಿಕೆಯನ್ನು ಪರಿಹರಿಸುವುದು ನಿಜಕ್ಕೂ ಕೂಡ ಒಳ್ಳೆಯ ಪುಣ್ಯದ ಕೆಲಸವಾಗಿದ್ದು ನಿಮಗೆ ಪುಣ್ಯದ ಸಂಪಾದನೆ ಮಾಡಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಣ್ಣುಗಳನ್ನು ದಾನ ಮಾಡಬೇಕು: ಹಣ್ಣುಗಳನ್ನು ಸಾಮಾನ್ಯವಾಗಿ ದಾನ ಮಾಡುವುದು ಕೂಡ ಒಳ್ಳೆಯದು ಹಾಗೂ ಒಂದು ವೇಳೆ ಬೆಳಗ್ಗೆ ಪೂಜೆ ಆದ ನಂತರ ದೇವರಿಗೆ ಇಟ್ಟಿದ್ದ ಪೂಜೆ ಹಣ್ಣುಗಳನ್ನು ಕೂಡ ಬಡವರಿಗೆ ದಾನ ಮಾಡುವುದು ನಿಮಗೆ ಇನ್ನಷ್ಟು ಪುಣ್ಯ ಪ್ರಾಪ್ತಿಯನ್ನು ಮಾಡುತ್ತದೆ. ಹೌದು ಮಿತ್ರರೇ ಆದರೆ ಬೇಸಿಗೆಯಲ್ಲಿ ಮಾತ್ರ ಯಾರಿಗಾದರೂ ಹಣ್ಣನ್ನು ದಾನ ಮಾಡುವುದಿದ್ದರೆ ಗೌಪ್ಯವಾಗಿ ಮಾಡಬೇಕು. ಯಾವತ್ತು ಹಣ್ಣನ್ನು ದಾನ ಮಾಡುವಾಗ ಕ’ ತ್ತರಿಸಿದ ಹಣ್ಣನ್ನು ಮಾತ್ರ ದಾನ ಮಾಡಬೇಡಿ.

ಮೊಸರನ್ನು ದಾನ ಮಾಡುವುದು: ಮೊಸರಿಗೂ ಕೂಡ ಸಾಕಷ್ಟು ಮಹತ್ವವಿದ್ದು ಅದರಲ್ಲಿರುವ ವೈಜ್ಞಾನಿಕ ಆರೋಗ್ಯ ಸತ್ವಗಳು ಕೂಡ ಇದನ್ನು ದಾನ ಮಾಡುವುದು ಒಳ್ಳೆಯದು ಎಂಬುದಾಗಿ ಹೇಳುತ್ತವೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂಡ ಮೊಸರನ್ನು ದಾನ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನ ಬಲವಾಗಲಿದೆ ಎಂಬುದಾಗಿ ಉಲ್ಲೇಖಿತವಾಗಿದೆ.

Leave a Comment

error: Content is protected !!