Chanakya Money Tips ಆಚಾರ್ಯ ಚಾಣಕ್ಯರು ಇತಿಹಾಸ ಪ್ರಸಿದ್ಧರು ಹಾಗೂ ಮೇಧಾವಿಗಳು ಆಗಿದ್ದು ಅವರು ತಮ್ಮ ಚಾಣಕ್ಯತೆ ಗ್ರಂಥದಲ್ಲಿ ಸಾಕಷ್ಟು ವಿಚಾರಗಳ ಕುರಿತಂತೆ ವಿಚಾರ ವಿಮರ್ಶೆಯನ್ನು ಮಾಡಿ ತನ್ನ ಅನುಭವದ ಸಾರವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಈ ನಾಲ್ಕು ರೀತಿಯ ವ್ಯಕ್ತಿಗಳ ಜೇಬಿನಲ್ಲಿ ಯಾವತ್ತೂ ಕೂಡ ಹಣ ಉಳಿಯುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಹಾಗಿದ್ದರೆ ಆ ನಾಲ್ಕು ರೀತಿಯ ವ್ಯಕ್ತಿಗಳು ಯಾರೆಂದು ತಿಳಿಯೋಣ ಬನ್ನಿ.
ಚಾಣಕ್ಯರು ಹೇಳುವ ಹಾಗೆ ಕೊಳಕುರೀತಿಯ ಬಟ್ಟೆಯನ್ನು ಧರಿಸುವಂತಹ ವ್ಯಕ್ತಿಯ ಬಳಿ ಯಾವತ್ತೂ ಕೂಡ ಹಣ ಉಳಿಯುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಹಲ್ಲಿನಲ್ಲಿ ಕೊಳಕನ್ನು ಹೊಂದಿರುವಂತಹ ವ್ಯಕ್ತಿಯ ಬಳಿ ಕೂಡ ಹಣ ಉಳಿಯುವುದಿಲ್ಲ ಎಂಬುದಾಗಿ ಅವರು ಹೇಳುತ್ತಾರೆ.
ಇನ್ನು ಒಂದು ವೇಳೆ ಒಬ್ಬ ವ್ಯಕ್ತಿ ಅತ್ಯಂತ ಹೊಟ್ಟೆಬಾಕನಾಗಿದ್ದರೆ ಆತ ತನ್ನ ಎಷ್ಟದ ಆಹಾರವನ್ನು ಖರೀದಿಸುವ ಸಲುವಾಗಿ ತನ್ನ ಬಳಿ ಇರುವಂತಹ ಎಲ್ಲಾ ಹಣವನ್ನು ಕೂಡ ಹಿಂದು ಮುಂದು ನೋಡದೆ ಖರ್ಚು ಮಾಡುತ್ತಾನೆ ಆತನ ಬಳಿ ಕೂಡ ಹಣ ಉಳಿಯುವುದಿಲ್ಲ ಎಂಬುದಾಗಿ ಆಚಾರ್ಯ ಚಾಣುಕರು ಹೇಳುತ್ತಾರೆ.
ಸೂರ್ಯೋದಯ ಆದ ನಂತರವೂ ಕೂಡ ಸಾಕಷ್ಟು ಗಂಟೆಗಳ ಕಾಲ ಇನ್ನು ನೀವು ಹಾಸಿಗೆಯಲ್ಲಿ ಮಲಗಿಸುತ್ತಿದ್ದರೆ ನಿಮ್ಮಂತಹ ಸೋಮಾರಿ ಯಾರು ಕೂಡ ಇರಲು ಸಾಧ್ಯವಿಲ್ಲ ಎಂಬುದಾಗಿ ಪರಿಗಣಿಸಿ ಆಚಾರ್ಯ ಚಾಣಕ್ಯರು ಅಂತಹ ವ್ಯಕ್ತಿಗಳನ್ನು ಕೂಡ ಇದೇ ವಿಭಾಗಕ್ಕೆ ಸೇರಿಸುತ್ತಾರೆ. ಒಂದು ವೇಳೆ ನೀವು ಕೂಡ ಈ ಮೇಲಿನ ಯಾವುದಾದರೂ ವರ್ಗಕ್ಕೆ ಸೇರಿದರೆ ಎಂದೆ ಹೊರಬಂದು ಶಿಸ್ತು ಬದ್ಧ ಜೀವನವನ್ನು ನಡೆಸಿ.