Darshan Yash ಕನ್ನಡ ಸಿನಿಮಾ ಒಂದು ಕುಟುಂಬ ಎಂಬುದಾಗಿದೆ ಹೇಳುತ್ತಾರೆ ಅದೇ ರೀತಿಯಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ಗಳು ಕೂಡ ಆಗಾಗ ಒಂದು ಸ್ಥಳದಲ್ಲಿ ಸೇರುತ್ತದೆ. ಇನ್ನು ಕೆಲವು ನಟರ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು ಅದು ಕೂಡ ನಿಮಗೆ ತಿಳಿದಿರುವಂತಹ ವಿಚಾರ. ಇನ್ನು ಎಲ್ಲಾ ನಟರನ್ನು ಸೇರಿಸುವಂತಹ ಒಂದು ಕಾರ್ಯಕ್ರಮವನ್ನು ಕಿಚ್ಚ ಸುದೀಪ್(Kiccha Sudeep) ಈ ಬಾರಿ ಕೂಡ ಮಾಡಲು ಹೊರಟಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಕೆಸಿಸಿ ಸೀಸನ್ 3ರ(KCC Season 3) ಕುರಿತಂತೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ಅವರ ಮುಂದಾಳತ್ವದಲ್ಲಿ ನಡೆಯುವಂತಹ ಕನ್ನಡ ಚಲನಚಿತ್ರ ಕಪ್(Kannada Chalanachitra Cup) ನ ಮೂರನೇ ಅವತರಿಣಿಕೆ ಇದೇ ಫೆಬ್ರವರಿ ಯ ಕೊನೆಯ ವಾರದಲ್ಲಿ ಅದ್ದೂರಿಯಾಗಿ ನಡೆಯುವುದಕ್ಕೆ ಸಜ್ಜಾಗಿ ನಿಂತಿದೆ. ಈ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಕನ್ನಡ ಚಿತ್ರರಂಗದ ನಟರು ಕ್ರಿಕೆಟಿಗಳು ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ತಾರೆಗಳಾದ ಕ್ರಿಸ್ ಗೇಲ್(Chris Gayle) ಸುರೇಶ ರೈನಾ ಬ್ರೈನ್ ಲಾರಾ ತಿಲಕರತ್ನೆ ದಿಲ್ಶನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಕೂಡ ಭಾಗವಹಿಸಲಿದ್ದಾರೆ.
ಇನ್ನು ಈ ಬಾರಿ ದರ್ಶನ್(Dboss) ಹಾಗೂ ಯಶ್(Yash) ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾಧ್ಯಮದವರ ಪರೋಕ್ಷವಾದ ಪ್ರಶ್ನೆಗೆ ಅವರು ಪ್ರಶ್ನೆ ಕೇಳುವ ಮುಂಚೆನೇ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ. ಚಿತ್ರರಂಗ ಒಂದು ಕುಟುಂಬ ಇದ್ದಂತೆ ಇದು ಯಾರಪ್ಪನ ಸ್ವತ್ತು ಕೂಡ ಅಲ್ಲ ಎಂಬುದಾಗಿ ಕಿಚ್ಚ(Kiccha) ಖಡಕ್ ಆಗಿಯೇ ಮಾತನ್ನು ಪ್ರಾರಂಭಿಸುತ್ತಾರೆ.
ಮಾತನ್ನು ಮುಂದುವರಿಸುತ್ತಾ ಚಿತ್ರರಂಗದ ಎಲ್ಲರಿಗೂ ಕೂಡ ಈ ಕ್ರಿಕೆಟ್ ಟೂರ್ನಮೆಂಟ್ ಗೆ ಆಹ್ವಾನವನ್ನು ನೀಡಿದ್ದೇವೆ ಆದರೆ ಕೆಲವರಿಗೆ ಅವರದ್ದೇ ಆದಂತಹ ಕಾರಣಗಳಿಂದಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಕಾಣಿಸಿಕೊಳ್ಳುವುದು ಅನುಮಾನವಾಗಿದ್ದು ಅದನ್ನು ಬಿಟ್ಟು ಅವರ್ಯಾಕೆ ಬರಲಿಲ್ಲ ಇವರ್ಯಾಕೆ ಬರಲಿಲ್ಲ ಎಂಬ ಪ್ರಶ್ನೆಯನ್ನು ಕೇಳುವುದನ್ನು ಬಿಟ್ಟುಬಿಡಿ ಎಂಬುದಾಗಿ ಮಾಧ್ಯಮದವರಿಗೆ ಕಿಚ್ಚ(Kiccha) ಹೇಳಿದ್ದಾರೆ. ಕಿಚ್ಚನ ಈ ಪ್ರತಿಕ್ರಿಯೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.