ಸ್ನಾನ ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬಾರದು ಅನ್ನುತ್ತೆ ಶಾಸ್ತ್ರ

ಸ್ನಾನ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಆ ತಪ್ಪುಗಳು ಯಾವುವೆಂದು ಈ ಲೇಖನದ ಮೂಲಕ ತಿಳಿಯೋಣ.

ಹಿಂದೂ ಧರ್ಮ ಶಾಸ್ತ್ರಗಳ ಪ್ರಕಾರ ಸ್ನಾನ ಮಾಡುವಾಗ ಹಲವು ನಿಯಮಗಳನ್ನು ಪಾಲಿಸಬೇಕು. ಆದರೆ ಆಧುನಿಕ ಕಾಲದಲ್ಲಿ ಹಲವು ಬದಲಾವಣೆಗಳಾಗಿವೆ. ಪೂರ್ಣ ನಗ್ನನಾಗಿ ಸ್ನಾನ ಮಾಡಬಾರದು ಎಂದು ಪದ್ಮ ಪುರಾಣದಲ್ಲಿದೆ, ಹೀಗೆ ಮಾಡುವುದರಿಂದ ಮನುಷ್ಯ ಪಾಪದ ಭಾಗಿಯಾಗುತ್ತಾನೆ. ಇದಕ್ಕೆ ಸಂಬಂಧಿಸಿ ಪದ್ಮಪುರಾಣದಲ್ಲಿ ಒಂದು ಕಥೆಯಿದೆ. ಒಮ್ಮೆ ಗೋಪಿಯರು ಸ್ನಾನ ಮಾಡಲು ನದಿಗೆ ಇಳಿದಿರುತ್ತಾರೆ, ಕೃಷ್ಣನು ಅವರ ಬಟ್ಟೆಯನ್ನು ಕದಿಯುತ್ತಾನೆ. ಗೋಪಿಯರು ತಮ್ಮ ವಸ್ತ್ರವನ್ನು ಹುಡುಕಲು ಶುರು ಮಾಡುತ್ತಾರೆ ಆದರೆ ಅವರಿಗೆ ಸಿಗಲಿಲ್ಲ ಆಗ ಕೃಷ್ಣ ವಸ್ತ್ರಗಳು ಗಿಡದಲ್ಲಿ ಇವೆ ಬಂದು ತೆಗೆದುಕೊಳ್ಳಿ ಎನ್ನುತ್ತಾನೆ, ಆದರೆ ವಸ್ತ್ರಗಳಿಲ್ಲದೆ ಗೋಪಿ ಸ್ತ್ರೀಯರು ಹೇಗೆ ಹೊರಗೆ ಬರಲು ಸಾಧ್ಯ ಆಗ ಕೃಷ್ಣ ನಾನು ಎಲ್ಲಾಕಡೆ ಇರುತ್ತೇನೆ ಆಕಾಶದಲ್ಲಿ ಹಾರುವ ಪಕ್ಷಿ, ನೆಲದ ಮೇಲೆ ಓಡಾಡುವ ಜೀವಿಗಳಲ್ಲಿ ಅಥವಾ ನೀರಿನಲ್ಲಿರುವ ಜೀವಿಗಳಲ್ಲಿ ಸಹ ಇರುವೆ, ಜಲದಲ್ಲಿ ನಿರ್ವಸ್ತ್ರವಾಗಿ ಇಳಿದರೆ ಜಲರೂಪದ ವರುಣನು ನೋಡುವನು ಹೀಗಾಗಿ ನಿರ್ವಸ್ತ್ರವಾಗಿ ಸ್ನಾನ ಮಾಡಬಾರದು.

ಗರುಡ ಪುರಾಣದ ಪ್ರಕಾರ ನೀವು ಸ್ನಾನ ಮಾಡುತ್ತಿರುವಾಗ ನಿಮ್ಮ ಸುತ್ತ ಮುತ್ತ ರಕ್ಷಣೆ ರೂಪದಲ್ಲಿದ್ದು ನಿಮ್ಮ ವಸ್ತ್ರದಿಂದ ಬೀಳುವ ಜಲವನ್ನು ಸ್ವೀಕರಿಸುತ್ತಾರೆ ಇದರಿಂದ ಅವರಿಗೆ ತೃಪ್ತಿಯಾಗುತ್ತದೆ. ನಿರ್ವಸ್ತ್ರವಾಗಿ ಸ್ನಾನ ಮಾಡುವುದರಿಂದ ಅವರು ಅತೃಪ್ತರಾಗಿ ಸಿಟ್ಟು ಮಾಡಿಕೊಳ್ಳುತ್ತಾರೆ ಇದರಿಂದ ವ್ಯಕ್ತಿಯ ಧನ, ಸುಖ ನಷ್ಟವಾಗುತ್ತದೆ, ಅಲ್ಲದೇ ಪಿತೃ ದೋಷವು ಬರುತ್ತದೆ. ಸ್ನಾನ ಮಾಡಿದ ನಂತರ ಶೌಚಾಲಯ ಕ್ಲೀನ್ ಮಾಡದೆ ಹಾಗೆ ಬಿಡಬಾರದು. ಕೆಲವರು ಸ್ನಾನ ಮಾಡಿದ ನಂತರ ಶೌಚಾಲಯದಲ್ಲಿ ಕೆಟ್ಟ ನೀರನ್ನು ಬಿಟ್ಟು ಬಿಡುತ್ತಾರೆ ಅಥವಾ ನೀರನ್ನು ಹಾಳು ಮಾಡುತ್ತಾರೆ. ಇದರಿಂದ ವರುಣನು ಸಿಟ್ಟಾಗುತ್ತಾನೆ. ಜ್ಯೋತಿಷ್ಯದ ಪ್ರಕಾರ ಈ ಹವ್ಯಾಸವು ದುರ್ಭಾಗ್ಯವನ್ನು ತರುತ್ತದೆ. ಯಾರು ಶೌಚಾಲಯ ಕ್ಲೀನ್ ಮಾಡದೆ ಇರುತ್ತಾರೋ ಅವರಿಗೆ ಚಂದ್ರದೋಷದ ಜೊತೆಗೆ ರಾಹು, ಕೇತುವಿನ ದೋಷವು ಬರುತ್ತದೆ. ಇದರಿಂದ ಈ ನಿಯಮಗಳನ್ನು ತಪ್ಪದೇ ಎಲ್ಲರೂ ಪಾಲಿಸಿ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave a Comment

error: Content is protected !!